ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Saturday, September 22, 2007

ವೆಬ್‌ದುನಿಯಾ ವಾರದ ಬ್ಲಾಗ್: ಅವಧಿ

ಬೆಳೆಯುತ್ತಿರುವ ಕನ್ನಡ ಬ್ಲಾಗ್ ಲೋಕ ಅದ್ಭುತವಾಗಿ ಬೆಳಗುತ್ತಿದೆ. ಕೆಲವು ಬ್ಲಾಗ್‌ಗಳು ಆಂತರ್ಯದ ದನಿಯಾಗಿದ್ದರೆ, ಇನ್ನು ಕೆಲವು ಭಾವನೆಗಳ ಬಿತ್ತರ. ಮತ್ತೆ ಕೆಲವರಿಗೆ ಅವರದ್ದೇ ಕತೆ, ಕಾವ್ಯ, ಲಹರಿಗಳ ಸಂಕಲನ. ಈ ಮಧ್ಯೆ ಒಂದು ನಿರ್ದಿಷ್ಟ ಉದ್ದೇಶದಿಂದ ಹೋರಾಟದ, ಸುಧಾರಣೆಯ ಕೆಚ್ಚಿನಿಂದ(ಕಿಚ್ಚಿನಿಂದ) ಬ್ಲಾಗಿಸುವವರೂ ಇದ್ದಾರೆ. ಇವುಗಳಲ್ಲಿ ಅತ್ಯುತ್ತಮ ಬ್ಲಾಗ್ ಅಂತ ಆರಿಸೋದು ಕಷ್ಟದ ಸಂಗತಿ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ, ಓದಲೂ ಚೆನ್ನ.

ಈ ಬ್ಲಾಗುಗಳನ್ನು ಗುರುತಿಸಿ ಪರಿಚಯಿಸುವ ಮತ್ತು ವಾರಕ್ಕೊಂದು ಬ್ಲಾಗಿನ ಮೇಲೆ ಬೆಳಕು ಚೆಲ್ಲುವ ಈ ಅಭಿಯಾನವನ್ನು ನಾವಿಂದು ಆರಂಭಿಸುತ್ತಿದ್ದೇವೆ. ಈ ಬಾರಿ ನಮ್ಮ ಆಯ್ಕೆ "ಅವಧಿ" ಬ್ಲಾಗ್.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯುವರಾಜ್‌ಗೆ ನಾಯಕತ್ವ ದೊರೆಯದ ಕೊರಗು: ತಂದೆ ಶಂಕೆ

ಡರ್ಬನ್‌ನಲ್ಲಿ ಮೈದಾನದಲ್ಲಿ ರನ್ನುಗಳ ಸುರಿಮಳೆ ಸುರಿಸಿ ಹೀರೋ ಪಟ್ಟ ಅಲಂಕರಿಸತೊಡಗಿರುವ ಯುವರಾಜ್ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ದೊರೆತಿಲ್ಲ ಎಂಬ ಕೊರಗು ಕಾಡುತ್ತಿದೆಯೇ?

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಪ್ರಕಾರ, ಹೌದು. ಈ ವಿಷಯದಲ್ಲಿ ಮಗ ತಮ್ಮ ಬಳಿ ಒಮ್ಮೆಯೂ ವಿಷಯವೆತ್ತಿಲ್ಲ, ಆದರೆ ನಾಯಕತ್ವ ವಿಷಯದಲ್ಲಿ ತಮ್ಮ ಮಗನನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ ಅವರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Friday, September 21, 2007

ಅಕ್ಷನ್ ಚಿತ್ರಕ್ಕೆ ತನುಶ್ರೀ ರೆಡಿ

ಗ್ಲಾಮರಸ್ ಪಾತ್ರಗಳಿಗೆ ಹೆಸರಾದ ತನುಶ್ರೀ ದತ್ತಾ ಈಗ ಆಕ್ಷನ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಕೊಟ್ಟಿಲ್ಲ ಮತ್ತು ಹಾಡಿ ಅಬ್ರಾರ್ ನಿರ್ದೇಶಿಸುತ್ತಿದ್ದಾರೆ.

"ಇದು ಮುಖ್ಯವಾಹಿನಿ ಸಿನೆಮಾದ ಭಾಗವಲ್ಲ.ಮಕ್ಕಳನ್ನು ಕೇಂದ್ರವಸ್ತುವಾಗಿಸಿಕೊಂಡು ನಿರ್ಮಿಸಲಾಗಿದೆ. ವಿಶೇಷ ಪರಿಣಾಮಗಳು ಮತ್ತು ಫ್ಯಾಂಟಸಿಗಳಿಂದ ಕೂಡಿದ ಮಕ್ಕಳ ಚಿತ್ರ" ಎಂದು ತನುಶ್ರೀ ವಿವರಿಸುತ್ತಾಳೆ. ಸದಾ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿ ತನುಶ್ರೀಗೆ ಬೋರಾಗಿದೆಯಂತೆ.

"ಶಾಣ್ಯಾರ ಕೂಡಿ ಶ್ಯಾವಿಗಿಗಿ ಉಪ್ಪ ಹಾಕಿದ್ದರಂತ"..

ಧರ್ಮಾಂಧತೆ ಮತ್ತು ಭಾಷಾಂಧತೆ ಮತ್ತು ಬುದ್ದಿಜೀವಿಗಳನ್ನು ಮತ್ತು ಅಂತಹ ಗುಣ ಸಂಪನ್ನರನ್ನು ಒಂದು ಕಡೆ ಸೇರಿಸಿದರೆ ಏನಾಗುತ್ತದೆ ? ಎನ್ನುವುದಕ್ಕೆ ರಾಮ ಸೇತು ವಿವಾದ ಚೆಂದದ ಉದಾಹರಣೆಯಾಗಬಲ್ಲದು. ತಮಿಳುನಾಡಿನಲ್ಲಿ ಕರುಣಾನಿಧಿ, ರಾಮ ಅನ್ನೊ ವ್ಯಕ್ತಿ ಶಾಲೆ ಕಲಿತಿಲ್ಲ ಅವನಿಗೆ ಅಕ್ಷರ ಜ್ಞಾನ ಇಲ್ಲ ಎಂದು ಹೇಳಿದರೆ ಅಲ್ಲಿ ದೂರದ ಬೆಂಗಳೂರಿನಲ್ಲಿ ರಾಮ ಭಕ್ತರು ಏನೂ ಗೊತ್ತಿರದ ಸೆಲ್ವಿ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡ್ತಾರೆ.


ಇದೇ ಅವಕಾಶ ಸಿಕ್ತು ಅಂತ ಕೆಲವರಿಂದ , ಏನೂ ಅರಿಯದ ತನ್ನ ಪಾಡಿಗೆ ಬುರ್ರ ಎಂದು ಹೋಗುವ-ಬರುವ ತಮಿಳು ನಾಡಿನ ಬಸ್ಸು (ಬಂಡಿ) ಬೆಂಕಿಗೆ ಆಹುತಿಯಾಗುತ್ತದೆ.

ರಾಮನ ವಿಚಾರದಿಂದಲೇ ಪ್ರಾರಂಭಿಸೋಣ.. ತನಗೆ ದೇವರು ಅನ್ನೊ ಕಲ್ಪನೆ ಬೇಡ ಎಂದ ಮಾತ್ರಕ್ಕೆ ಇತರರಿಗೂ ಬೇಡವೆ ? ಓಟು ಬ್ಯಾಂಕ್ ಲೆಕ್ಕಾಚಾರ ಬದಿಗಿಟ್ಟರೂ ಕರುಣಾನಿಧಿ ಹೇಳಿಕೆ ತಪ್ಪು. ದೇವರು ಬೇಡ. ಅವನ ಏಜೆಂಟರಾದ ಬ್ರಾಹ್ಮಣರೂ ಬೇಡ ಎಂದು ಹೇಳಿದ್ದ ಪೆರಿಯಾರ್ ರಾಮಸ್ವಾಮಿ ಗುಂಪಿಗೆ ಸೇರಿದ ಕರುಣಾನಿಧಿ, ತಾವೊಬ್ಬರು ಸೇರಿದರೆ ಜಗತ್ತೇ ಸೇರಿದೆ ಎಂಬಂತೆ ಯಾಕೆ ಮಾತನಾಡಬೇಕು.
ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ

Thursday, September 20, 2007

ಮತ್ತೆ ಝೇಂಕರಿಸಿದ ರಾಣಿ ಮುಖರ್ಜಿ

ಬಾಲಿವುಡ್‌ನ ರಾಣಿ ಮುಖರ್ಜಿ ಮತ್ತೆ ಝೇಂಕರಿಸುತ್ತಿದ್ದಾಳೆ. ಸಂಜಯ್ ಲಿಲಾ ಭನ್ಸಾಲಿಯವರ ಸವಾರಿಯಾದಲ್ಲಿ ಉನ್ಮಾದತೆ ಸೃಷ್ಟಿಗೆ ಅವರು ಹೊರಟಿದ್ದಾರೆ.

ರಾಣಿಯ ಎರಡು ಮೆಗಾ ಪ್ರಾಜೆಕ್ಟ್‌ಗಳಲ್ಲಿ ಇದು ಮೊದಲನೆಯದು. ಎರಡನೆಯದು ಲಗಾ ಚುನಾರಿ ಮೇನ್ ಡಾಗ್. ಸವಾರಿಯಾದಲ್ಲಿ ಸಂಜಯ್ ಲೀಲಾ ಭನ್ಸಾಲಿ ಕನಸಿನ ಹುಡುಗ ರಣಬೀರ್ ಕಪೂರ್ ಸಲ್ಮಾನ್ ಬಾಯಿ ಜತೆ ಪಾತ್ರ ಹಂಚಿಕೊಂಡಿದ್ದಾರೆ.

6 ಬಾಲ್, 6 ಸಿಕ್ಸ್, 16 ಬಾಲ್, 58 ರನ್!

ಒಂದು ಓವರಿನಲ್ಲಿ ಐದು ಸಿಕ್ಸರ್ ಹೊಡೆಸಿಕೊಂಡ ಸೇಡನ್ನು ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ತೀರಿಸಿಕೊಂಡಿದ್ದಾರೆ.

ಅದೇ ಇಂಗ್ಲೆಂಡ್ ವಿರುದ್ಧ ಬುಧವಾರ ನಡೆದ ಟ್ವೆಂಟಿ ಟ್ವೆಂಟಿ ಪಂದ್ಯದ 19ನೇ ಓವರಿನ ಎಲ್ಲಾ ಚೆಂಡುಗಳನ್ನೂ ಬೌಂಡರಿ ಗೆರೆ ದಾಟಿಯೇ ಬೀಳುವಂತೆ ಬೀಸಿದ ಯುವರಾಜ್ ಸಿಂಗ್, ವಿಶ್ವ ದಾಖಲೆ ಸರಿಗಟ್ಟಿದರಲ್ಲದೆ, ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸ್ಫೋಟಿಸುವ ಮೂಲಕ, ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಶತಕಾರ್ಧ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

Tuesday, September 18, 2007

ತಿರುಮಲದಲ್ಲಿ ಗರುಡ ವಾಹನೋತ್ಸವ ಸಿದ್ಧತೆ

ತಿರುಪತಿ ಬ್ರಹ್ಮೋತ್ಸವ ವೈಭವವು ಅದ್ದೂರಿಯಿಂದ ನಡೆಯುತ್ತಿದೆ. ನಾಳೆ ವಿಶ್ವ ವಿಖ್ಯಾತ ಗರುಡ ವಾಹನೋತ್ಸವ ನಡೆಯಲಿದೆ. ವೆಬ್‌ದುನಿಯಾದಲ್ಲಿ ಅದರ ವೀಡಿಯೋ ಹಾಗೂ ವಿಶೇಷ, ಆಕರ್ಷಕ ಫೋಟೋ ಗ್ಯಾಲರಿ ಲಭ್ಯವಿದೆ.

ಜೀವಕ್ಕೆ ಎರವಾದ ಕುರುಡು ನಂಬಿಕೆ.

ನಂಬಿ ಬಂದವರಲ್ಲಿ ಅನಾಮತ್ತು 11 ಜನರನ್ನು ಸಾವಿನ ದವಡೆಗೆ ನೂಕಿ ನಿರುಮ್ಮಳವಾಗಿ ಕುಳಿತ ಸರೌತಾ ಬಾಬಾನ ಕಥೆಯಿದು. (ಸರೌತಾ ಅಂದರೆ ಕಾಯಿ ಕತ್ತರಿಸಲು ಉಪಯೋಗಿಸುವ ಒಂದು ಸಾಧನ) ಮಧ್ಯಪ್ರದೇಶದ ಜಬಲ್ಪುರ್ ಸಮೀಪದಲ್ಲಿದ್ದ ಈತ ಜನರಿಗೆ ಹೇಳಿದ್ದು ಏನು ಗೊತ್ತೇ ?

ಸರೌತಾದಿಂದ ನಿಮ್ಮ ಕಣ್ಣುಗಳ ರೋಗ ಕಡಿಮೆ ಮಾಡುತ್ತೇನೆ, ಏಡ್ಸ್, ಕ್ಯಾನ್ಸರ್‌ನಂತಹಾ ರೋಗಗಳನ್ನೂ ಇನ್ನಿಲ್ಲದಂತೆ ಮಾಡುತ್ತೇನೆ ಎಂದು. ಜನಾ ಎಂತವರು ನೋಡಿ, ಅಂವ ಹೇಳಿದ ಇವರು ಕೇಳಿದರು.

Monday, September 17, 2007

ಸೆಕ್ಸಿ ಪಾತ್ರಗಳನ್ನೇ ನೀಡುತ್ತಾರೇಕೆ?: ಉದಿತಾ ಪ್ರಶ್ನೆ

ಚಿತ್ರನಿರ್ಮಾಪಕರು ನನಗೆ ಸೆಕ್ಸಿ ದೃಶ್ಯಗಳಿಲ್ಲದ ಪಾತ್ರಗಳನ್ನು ಏಕೆ ಕೊಡುತ್ತಿಲ್ಲವೆಂಬುದೇ ಅರ್ಥವಾಗುತ್ತಿಲ್ಲ ಎಂದು ಉದಿತಾ ಗೋಸ್ವಾಮಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಎಲ್ಲೇ ಹೋಗಲಿ, ಪಾಪ್, ಜೆಹೆರ್ ಮತ್ತು ಅಕ್ಸರ್ ಚಿತ್ರದ ಹುಡುಗಿಯೆಂಬ ಭಾವನೆಯಿಂದ ನನ್ನನ್ನು ನೋಡುತ್ತಾರೆ ಎಂದಾಕೆ ಮನಬಿಚ್ಚಿ ನುಡಿದಿದ್ದಾರೆ.

ನಾನು ಅಂತಹ ಪಾತ್ರಗಳನ್ನು ಬಿಟ್ಟು ಬೇರೆ ರೀತಿಯಲ್ಲೂ ನಟಿಸಲು ಸಮರ್ಥಳು ಎಂದು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಉದಿತ್ ಪ್ರಶ್ನಿಸುತ್ತಾಳೆ.

ಲಕ್ಷ ಮೋದಕ ಸೇವ್ಯ ಖಜ್ರಾನಾ ಗಣೇಶ

ನಾವೆಲ್ಲರೂ ಗಣೇಶೋತ್ಸವವನ್ನು ಆಚರಿಸಿದ್ದೇವೆ. ಇಡೀ ದೇಶವೇ ಗಣಪನ ಜನ್ಮದಿನದ ಆಚರಣೆಯ ಸಡಗರದಲ್ಲಿದೆ. ಗಣೇಶೋತ್ಸವದ ಈ ಪರ್ವಕಾಲದಲ್ಲಿ ಇಂದೋರಿನ ಅತ್ಯಂತ ಪುರಾತನವಾದ ಮತ್ತು ಅಷ್ಟೇ ಪರಮ ಪವಿತ್ರ ಕ್ಷೇತ್ರ ಖಜ್ರಾನಾ ಮಂದಿರವನ್ನು ಪರಿಚಯಿಸಲಿದ್ದೇವೆ. ಈ ದೇವಸ್ಥಾನವನ್ನು ಕ್ರಿ.ಶ. 1735ರಲ್ಲಿ ಕಟ್ಟಲಾಗಿತ್ತು. ಇಲ್ಲಿ ಲಕ್ಷ ಮೋದಕ ಸೇವೆ ವಿಶಿಷ್ಟವಾದುದು.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger