ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Tuesday, December 25, 2007

ಸಡಗರ ಸಂಭ್ರಮದ ಕ್ರಿಸ್ಮಸ್

ವಿಶ್ವದೆಲ್ಲೆಡೆ ಡಿಸೆಂಬರ್ ಬಂತೆಂದರೆ ಹಬ್ಬದ ಸಡಗರ ಆರಂಭವಾಗಿರುತ್ತದೆ. ಅದರಲ್ಲೂ ಕ್ರೈಸ್ತ ಬಾಂಧವರಿಗೆ ಇದು ಪರ್ವ ಕಾಲ. ಪ್ರಭು ಯೇಸು ಕ್ರಿಸ್ತ ಹುಟ್ಟಿದ ದಿನದ ಆಚರಣೆಯ ಸಂಭ್ರಮ. ಇತ್ತೀಚಿನ ದಿನಗಳಲ್ಲಿ ಕ್ರಿಸ್ಮಸ್ ಎಂಬುದು ಸೌಹಾರ್ದತೆಯ ಸಡಗರವಾಗಿ, ಜಾತಿ-ಧರ್ಮಗಳ ಭೇದವಿಲ್ಲದೆ ವಿವಿಧೆಡೆ ಸಾಂಘಿಕವಾಗಿ, ಸಾಮೂಹಿಕವಾಗಿ ಆಚರಿಸಲ್ಪಡುತ್ತಿದೆ.

ಕ್ರಿಸ್ಮಸ್ ಹೆಸರು ಬಂದದ್ದು ಹಳೆಯ ಇಂಗ್ಲಿಷ್ ಭಾಷೆಯ ಕ್ರಿಸ್ಟಿಸ್ ಮೇಸೀ (Cristes Maesse) ಶಬ್ದದಿಂದ. ಕ್ರಿಸ್ತನ ದಿವ್ಯಪೂಜೆ ಎಂಬುದು ಇದರರ್ಥ. ಕ್ರಿಸ್ಮಸ್ ಕಥೆ ಆರಂಭವಾಗುವುದು ಸುಮಾರು ಎರಡು ಸಹಸ್ರಮಾನಗಳ ಹಿಂದೆ, ಬೆತ್ಲಹೆಮ್‌ನಲ್ಲಿ ಮಗುವೊಂದರ ಜನನದಿಂದ. ಕ್ರೈಸ್ತ ಸುವಾರ್ತೆ (ಗಾಸ್ಪೆಲ್) ಪ್ರಕಾರ, ಯೇಸು ಕ್ರಿಸ್ತನು ವರ್ಜಿನ್ ಮೇರಿಗೆ ಬೆತ್ಲಹೆಮ್‌ನಲ್ಲಿ ಹುಟ್ಟಿದ. ಯೇಸುವನ್ನು ಜೀಸಸ್ ಎಂದೂ ಕರೆಯುತ್ತಾರೆ.

ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.

ವೆಬ್‌ದುನಿಯಾ ಸಮೀಕ್ಷೆ - 2007

ವೆಬ್‌ದುನಿಯಾ ಸಮೀಕ್ಷೆ-2007 ಮೂಲಕ ಓದುಗರು ವರ್ಷದ ತಮ್ಮ ಇಷ್ಟದ ಅತ್ಯುತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಬಹುದಾಗಿದೆ. ಈ ಸಮೀಕ್ಷೆಯಲ್ಲಿ ವಿಭಿನ್ನ ವಿಷಯಗಳನ್ನು ಆದರಿಸಿ 10 ಪ್ರಶ್ನೆಗಳನ್ನು ನೀಡಲಾಗಿದೆ ಮತ್ತು ಅವುಗಳಿಗೆ ತಲಾ 10 ಆಯ್ಕೆಗಳನ್ನೂ ಒದಗಿಸಲಾಗಿದೆ. ಓದುಗರು ಈ 10 ಆಯ್ಕೆಗಳಲ್ಲಿ ಯಾವುದಾದರೊಂದನ್ನು ಆರಿಸಿ "ಸಬ್‌ಮಿಟ್" ಬಟನ್ ಒತ್ತಿದರಾಯಿತು.

ಓದುಗರಿಗೆ ತಮ್ಮ ಮತ ಚಲಾಯಿಸಲು ಜನವರಿ 10ರವರೆಗೆ ಅವಕಾಶವಿದ್ದು, ದೇಶ-ವಿದೇಶಗಳ ಓದುಗರ ಅಭಿಪ್ರಾಯಗಳನ್ನು ನಮ್ಮ ಒಂಬತ್ತು ಭಾಷೆಗಳ ಪೋರ್ಟಲ್‌ಗಳ ಮೂಲಕ ಸಂಗ್ರಹಿಸಿ, ಅದರ ಫಲಿತಾಂಶ ಪ್ರಕಟಿಸಲಾಗುತ್ತದೆ.

ಈ ಸಮೀಕ್ಷೆಯಲ್ಲಿ ನೀವು ಭಾಗವಹಿಸಬೇಕಿದ್ದರೆ ಮಾಡಬೇಕಾದುದಿಷ್ಟೇ. ಇಲ್ಲಿ ಕ್ಲಿಕ್ ಮಾಡಿ. ಮತ್ತು ನಿಮ್ಮ ಆಯ್ಕೆಗಳನ್ನು ಆರಿಸಿ.ಕಾಲಗರ್ಭಕ್ಕೆ ಸರಿದುಹೋಗುತ್ತಿರುವ 2007ರ ಒಂದು ಪೂರ್ವಾವಲೋಕನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

Monday, November 26, 2007

ಪ್ರಕಾಶ್ ಬಂಡಾಯ: ದಳ ವಿದಳನೆಯತ್ತ

ಜೆಡಿಎಸ್‌‌ನಲ್ಲಿನ ಅಸಮಾಧಾನ ಮತ್ತಷ್ಟು ಸ್ಫೋಟಗೊಳ್ಳುವ ಮೂಲಕ, ರಾಜ್ಯರಾಜಕಾರಣದಲ್ಲಿನ ಬಿಕ್ಕಟ್ಟು ಹೊರಬೀಳುವುದರೊಂದಿಗೆ ಇದೀಗ ಜೆಡಿಎಸ್‌‌ನ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಬಂಡಾಯದ ಬಾವುಟ ಹಾರಿಸಿದ್ದಾರೆ.

ಈ ಹಿಂದೆ ಪಕ್ಷದ ವರಿಷ್ಠರ ವಿರುದ್ಧ ಬಂಡಾಯ ಎದ್ದಿದ್ದ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಈಗ ನ.29ರಂದು ಕರೆದಿರುವ ಪ್ರಮುಖ ಮುಖಂಡರ ಸಭೆಗೆ ಗೈರು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದೇ ಹಾದಿಯಲ್ಲಿ ಸಾಗಲು ಅನೇಕ ಶಾಸಕರು ಮತ್ತು ಮುಖಂಡರು ನಿರ್ಧರಿಸುವ ಮೂಲಕ ಜೆಡಿಎಸ್ ಈಗ ಅಧಃಪತನದ ಅಂಚಿನಲ್ಲಿದೆ.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕ ವಿಧಾನಸಭೆ ವಿಸರ್ಜನೆಗೆ ಅಸ್ತು

ಕರ್ನಾಟಕ ವಿಧಾನಸಭೆ ವಿಸರ್ಜನೆಗೆ ಕೇಂದ್ರ ಸರಕಾರ ಸಮ್ಮತಿ ನೀಡಿದೆ.



ಕರ್ನಾಟಕವನ್ನು ಕೇಂದ್ರೀಯ ಆಡಳಿತದಡಿ ತರುವ ರಾಷ್ಟ್ರಪತಿ ಆಳ್ವಿಕೆ ಕುರಿತ ಪ್ರಸ್ತಾಪಕ್ಕೆ ಲೋಕಸಭೆ ಅಂಗೀಕಾರ ನೀಡಿದ ತಕ್ಷಣ ಕರ್ನಾಟಕ ವಿಧಾನಸಭೆ ವಿಸರ್ಜಿಸುವ ಉದ್ದೇಶ ಹೊಂದಿರುವುದಾಗಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಲೋಕಸಭೆಗೆ ತಿಳಿಸಿದ್ದರು.



ಪೂರ್ಣ ವರದಿಗೆ ವೆಬ್‌ದುನಿಯಾ ಕನ್ನಡ ನೋಡಿ.

Wednesday, November 21, 2007

ಸಿಡಿಯಲು ಸಜ್ಜಾಗಿದೆ "ಗಣಿ ರೆಡ್ಡಿ" ಪುಸ್ತಕ ಬಾಂಬ್!

ನೆಲದಲ್ಲಿ ಹೂತು ಹೋಗಿದೆಯೇ ಎಂಬ ಶಂಕೆ ಮೂಡಿಸಿದ್ದ ಬಳ್ಳಾರಿಯ ಗಣಿ ಬಾಂಬ್ ಮತ್ತೆ ಸಿಡಿಯಲು ಸಿದ್ಧವಾಗಿದೆ. ಇದರ ಹಿಂದಿನ ರೂವಾರಿ, ಜನಾರ್ದನ ರೆಡ್ಡಿ ಮತ್ತೆ ಮೈಕೊಡವಿ ನಿಂತಿದ್ದು, ಈ ಬಾಂಬ್ ಮತದಾರರ ಮನೆ ಮನೆಯಲ್ಲಿ ತನ್ನ ಪ್ರಭಾವ ಬೀರಲು ಸಜ್ಜಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿಗಳ ಗಣಿಲಂಚದ ಆರೋಪ ಹೊರಿಸಿದ್ದ "ಗಣಿ-ಧಣಿ" ಜನಾರ್ದನ ರೆಡ್ಡಿ, ಈ ಹಿಂದೆ ತಾವು ಮಾಡಿದ್ದ ಆರೋಪಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪುಸ್ತಕವೊಂದನ್ನು ಸಿದ್ಧಪಡಿಸಿದ್ದಾರೆ.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಲಜ್ಜೆಗೆಟ್ಟ ರಾಜಕೀಯ: ಕರ್ನಾಟಕದ ಮತ್ತೊಂದು ನಾಟಕ

ಇದು ವೆಬ್‌ದುನಿಯಾದಲ್ಲಿ ಸಾಪ್ತಾಹಿಕವಾಗಿ ಮೂಡಿಬರುತ್ತಿರುವ "ನೀವು ನಂಬುವಿರಾ" ಎಂಬ ಸರಣಿಗೆ ಪೂರಕವಾದ ರಂಜನೀಯ ಬೆಳವಣಿಗೆ... ರಾಜಕಾರಣಿಗಳನ್ನು ನೀವು ನಂಬುವಿರಾ? ಎಂದು ನಾವು ಕೇಳುತ್ತೇವೆ. ಹೌದು ಅಥವಾ ಇಲ್ಲ ಎಂದು ಉತ್ತರಿಸುವುದು ನಿಮಗೆ ಬಿಟ್ಟ ವಿಷಯ.

ಹೊಲಸು ರಾಜಕೀಯ ಎಂಬ ಪದಪುಂಜದ ಎಲ್ಲಾ ಮಜಲುಗಳನ್ನೂ ದಾಟಿ, ಇಡೀ ದೇಶಕ್ಕೆ ದೇಶವೇ ಕರ್ನಾಟಕದತ್ತ ನೋಡಿ ನಗುವಂತೆ ಮಾಡಿದ ರಾಜಕಾರಣವಿದು. ಪ್ರಜಾಪ್ರಭುತ್ವದಲ್ಲೇ ಒಂದು ಕಪ್ಪು ಚುಕ್ಕೆ. ಕರ್ನಾಟಕದ ಜನತೆಗೆ ಅವಮಾನ. ರಾಜ್ಯದ ಜನತೆಯ ನಂಬಿಕೆಗೇ ಇಟ್ಟ ಕೊಳ್ಳಿ. ಎರಡೂ ಪಕ್ಷಗಳ ಅಧಿಕಾರ ಲಾಲಸೆಯಿಂದ ನಿರ್ಮಾಣವಾಗಿದೆ ಇಂಥದ್ದೊಂದು ಸ್ಥಿತಿ.

Wednesday, November 7, 2007

ಈ ಪುಟಾಣಿ ಬಳಿ 40000 ಅಪರೂಪದ ನಾಣ್ಯಗಳು

ಒಂದು ಸಾಮಾನ್ಯ ಹವ್ಯಾಸವು ಇಡೀ ಜೀವನವನ್ನು ಸಂಭ್ರಮಿಸಲು ಹೇಗೆ ಸಾಧ್ಯವಾಗಬಹುದು ಎಂಬುದನ್ನು ಒರಿಸ್ಸಾದ 13 ವರ್ಷದ ಹುಡುಗನೊಬ್ಬ ತೋರಿಸಿಕೊಟ್ಟಿದ್ದಾನೆ. ನಾಣ್ಯ ಸಂಗ್ರಹಣೆಯ ತನ್ನ ಹವ್ಯಾಸವನ್ನು ಮುಂದುವರಿಸಿ ಆತ ಈಗಾಗಲೇ 40 ಸಾವಿರ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ಒಡೆಯನಾಗಿದ್ದಾನೆ!

ದೇವಿ ಪ್ರಸಾದ್ ಮಂಗರಾಜ್ ಈಗ 130 ದೇಶದಳಿಗೆ ಸೇರಿದ ಅಪರೂಪದ ನಾಣ್ಯ-ನೋಟುಗಳ ಒಡೆಯ. ಇವುಗಳಲ್ಲಿ ಕೆಲವಂತೂ 800 ವರ್ಷಕ್ಕೂ ಹಳೆಯವು ಮತ್ತು ಯಾವುದೇ ವಸ್ತು ಸಂಗ್ರಹಾಲಯದಲ್ಲೂ ಇರಲಾರದಂತಹ ಅಪರೂಪದವುಗಳು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

4 ಕಾಲು, 4 ಕೈಗಳ ಪುಟಾಣಿ ಲಕ್ಷ್ಮಿ ಶಸ್ತ್ರಚಿಕಿತ್ಸೆ ಯಶಸ್ವಿ

ವೈದ್ಯಲೋಕಕ್ಕೆ ಸವಾಲಾಗಿದ್ದ, ನಾಲ್ಕು ಕಾಲು, ನಾಲ್ಕು ಕೈಗಳುಳ್ಳ ಮಗುವಿನ ಅನವಶ್ಯಕ ಅಂಗಗಳನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬೆಂಗಳೂರು ವೈದ್ಯಕೀಯ ಜಗತ್ತು ಮತ್ತೊಂದು ದಾಖಲೆ ಮಾಡಿದೆ. ಸ್ಪರ್ಶ ಆಸ್ಪತ್ರೆಯಲ್ಲಿ ವಿಶೇಷ ಶಸ್ತ್ರ ಚಿಕಿತ್ಸೆಗೆ ದಾಖಲಾಗಿರುವ ಪುಟಾಣಿ ಲಕ್ಷ್ಮಿಗೆ ವಿಶೇಷ ಶಸ್ತ್ರ ಚಿಕಿತ್ಸೆ ಇಂದು ಬೆಳಗ್ಗೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Tuesday, November 6, 2007

ನಂಬಿಕೆಗಾಗಿ ನಾಲಿಗೆಯನ್ನೇ ಕೊಯ್ದುಕೊಳ್ಳುವವರು!

ನಂಬಿಕೆಯ ಹೆಸರಿನಲ್ಲಿ ಮತ್ತದರ ಉನ್ಮತ್ತತೆಯಲ್ಲಿ ಇವರು ತಮಗೆ ತಾವೇ ಮಾಡಿಕೊಳ್ಳುವ ಹಿಂಸೆಗೆ ಲೆಕ್ಕ ಇಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಾವು ಹೇಳುವ ಇಂದಿನ ಕಥೆಯಲ್ಲಿ ದೇವರಿಗೆ ಅರ್ಪಿಸುವ ಹೆಸರಿನಲ್ಲಿ ನಾಲಿಗೆಯನ್ನೇ ಕೊಯ್ದುಕೊಳ್ಳುತ್ತಾರೆ ಎಂದರೆ ನಂಬುತ್ತಿರಾ? ಇಂತಹದೊಂದು ವಿಚಿತ್ರ ನಂಬಿಕೆ ಮಧ್ಯಪ್ರದೇಶದ ಮಂಡ್ಸೌರ್ ಗ್ರಾಮದಲ್ಲಿದೆ.

ಸಾಮಾನ್ಯವಾಗಿ ಶಕ್ತಿದೇವತೆಯ ಆರಾಧನೆಯ ಸಮಯದಲ್ಲಿ ಇಂತಹ ಭಕ್ತಿಯ ಪರಾಕಾಷ್ಠೆಯಲ್ಲಿ ದೇವಿಯ ಪೂಜಾರಿಯ ಮುಂದಾಳುತ್ವದಲ್ಲಿ ದೇಹಕ್ಕೆ ಮಾಡಿಕೊಳ್ಳುವ ಹಿಂಸೆಯ ಪರಿ ಇದೆಯಲ್ಲ, ಅದು ಮನಸ್ಸಿಗೆ ಮಂಕು ಹಿಡಿಸುವುದು ಖಂಡಿತ.



4 ಕೈ, 4 ಕಾಲಿನ ಮಗುವಿಗೆ ಶಸ್ತ್ರಚಿಕಿತ್ಸೆ ಆರಂಭ

ನಾಲ್ಕುಕೈ, ನಾಲ್ಕು ಕಾಲುಗಳುಳ್ಳ ಎರಡು ವರ್ಷ ಪ್ರಾಯದ ಬಾಲಕಿಯೊಬ್ಬಾಕೆಯ ಜನ್ಮಜಾತ ವೈಕಲ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ 40 ಗಂಟೆಗಳ ಅವಿರತ ಶಸ್ತ್ರಚಿಕಿತ್ಸೆ ಕಾರ್ಯವು ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.

ತಲೆಯಿಲ್ಲದ ಅವಳಿ ಮಕ್ಕಳ ಸಂಯೋಗದಿಂದಾಗಿ ಈ ವೈಕಲ್ಯ ಉಂಟಾಗಿದ್ದು, ಬಾಲಕಿ ಲಕ್ಷ್ಮಿಯು ಬಿಹಾರದ ಅರಾರಿಯಾ ಜಿಲ್ಲೆಯ ಪುಟ್ಟ ಹಳ್ಳಿಯವಳು.


Monday, November 5, 2007

ಸಂಗೀತ ಸಾಮ್ರಾಟ್ ಬಟೂಕ ಭೈರವ

ಇದು ಲಕ್ನೋ ನಗರಕ್ಕೆ ತೀರ ಸಮಿಪ ಇರುವ ಕನಸ್ರಾಬಾಗ್‌ದಲ್ಲಿ ಇರುವ ಸಂಗೀತ ಸಾಮ್ರಾಟ್, ಗಾನಪ್ರಿಯ ಬಟೂಕ ಭೈರವನ ಕಥೆ. ಲಯಕರ್ತೃ ಶಿವನು ಸಂಗೀತ ಮತ್ತು ನಾಟ್ಯ ಪ್ರಿಯ ಅದರಂತೆ ಮದ್ಯಪ್ರಿಯನು ಹೌದು. ಈ ಮಂದಿರಕ್ಕೆ ಭಕ್ತರು ಸೇರಿದಂತೆ ಸಂಗೀತಾರಾಧಕರು ಮತ್ತು ಸಂಗೀತ ಕಲೆಯ ಉಪಾಸಕರು ಬರುವುದು ವಾಡಿಕೆ.

ಸಂಗೀತಕ್ಕೆ ಮತ್ತು ಕಥಕ್ ನೃತ್ಯಕ್ಕೆ ಹೆಸರು ಮಾಡಿರುವ ಇದು ಕಥಕ್ ಘರಾನಾದ ಮೂಲ ಎಂದು ಪ್ರತೀತಿ ಇದೆ. ಹಿಂದೂಸ್ತಾನಿ ಸಂಗೀತದಲ್ಲಿ ಘರಾನಾ ಶಬ್ದ ಬಳಕೆಯಲ್ಲಿದ್ದು. ವಿಶಿಷ್ಟ ರೀತಿಯ ಸಂಗೀತವನ್ನು ಅಳವಡಿಸಿಕೊಂಡ ನಂತರ ಬರುವ ಶೈಲಿಗೆ, ಆ ಮನೆತನದ ಇಲ್ಲವೆ, ಆ ಪ್ರದೇಶದ ಹೆಸರನ್ನು ಮುಂದೆ ಸೂಚಿಸುವ ಮೂಲಕ ಆ ಶೈಲಿಯ ಸಂಗೀತದ ವ್ಯುತ್ಪನ್ನದ ಮೂಲವನ್ನು ಘರಾನಾ ಶಬ್ದ ತಿಳಿಸುತ್ತದೆ.


ಕ್ರಿಕೆಟ್‌ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

ಕ್ರಿಕೆಟ್‌ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

Saturday, November 3, 2007

ಬಿಜೆಪಿ-ಜೆಡಿಎಸ್ ಶಾಸಕರಿಂದ ಧರಣಿ ಆರಂಭ

ಸರಕಾರ ರಚನೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ಧೋರಣೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳ ಶಾಸಕರು ನಗರದಲ್ಲಿಂದು ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದರು.

ಬಿಜೆಪಿ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಸರಕಾರ ರಚನೆಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಂದ ಅಹ್ವಾನ ಕರೆ ಬರುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಉಭಯ ಪಕ್ಷದ ಮೂಲಗಳು ತಿಳಿಸಿವೆ.


ವೆಬ್‌ದುನಿಯಾ ವಾರದ ಬ್ಲಾಗ್: ಚಂಪಕಾವತಿ

"ಇಲ್ಲಿ ಋಷಿಗಳ ವೇಷ ತೊಟ್ಟವರು ಆರಾಮವಾಗಿ ಸಿಗರೇಟು ಸೇದುತ್ತಾರೆ. ಸೀರೆ ಉಟ್ಟ ಹುಡುಗ, ಸೆರಗು ಯಾವ ಹೆಗಲಿಗೆಂದು ಗಲಿಬಿಲಿಗೊಳ್ಳುತ್ತಾನೆ. ರೈತನ ವೇಷ ತೊಟ್ಟ ಪೇಟೆ ಹುಡುಗಿ ನಾಚಿಕೆಯಿಂದ ಮುದುಡಿಹೋಗುತ್ತಾಳೆ. ಒಂದರ ಹಿಂದೊಂದು ಪ್ರವೇಶ. ಪರದೆ ಎಳೆಯುವವನೇ ಇಲ್ಲ ! ಚಂಪಕಾವತಿಯ ಎಣ್ಣೆ ಕೊಪ್ಪರಿಗೆಗೆ ಇಲ್ಲಿಂದ ಒಂದೇಒಂದು ಉರುಳು ! ಸ್ವಾಗತವು ನಿಮಗೆ."

ಇವು ಚಂಪಕಾವತಿ ಬ್ಲಾಗಿನ ಹಣೆಬರಹದ ಕೆಳಗೆ ಕಾಣಿಸುವ ಸಾಲುಗಳು. ಇವುಗಳನ್ನು ಓದಿದ ಕೂಡಲೇ ಈ ಬ್ಲಾಗಿನ ಉದ್ದೇಶ ನಮ್ಮ ಮುಂದೆ ಗರಿಗೆದರುತ್ತದೆ. ರಂಗಭೂಮಿ ಕ್ಷೇತ್ರದಲ್ಲಿ ಅಪರಿಮಿತ ಆಸಕ್ತಿ ಹೊಂದಿರುವಂತೆ ತೋರುವ ಸುಧನ್ವಾ ಅವರು ಚಂಪಕಾವತಿಯಲ್ಲಿ (http://deraje.blogspot.com/) ತಮ್ಮ ಅನುಭವಗಳನ್ನು ತೋಡಿಕೊಳ್ಳುತ್ತಾರೆ ಹಾಗೂ ಚರ್ಚಿಸುತ್ತಾರೆ.


Tuesday, October 30, 2007

ಜಗತ್ತಿನ ಅತಿದೊಡ್ಡ ಶ್ರೀಮಂತ ಅಂಬಾನಿ

ಈಗ ಭಾರತ ಪ್ರಕಾಶಿಸುತ್ತಿದೆ... ನಾವೂ ಶ್ರೀಮಂತರು ಎಂಬುದನ್ನು ಭಾರತೀಯ ಉದ್ಯಮಿಗಳು ಜಗತ್ತಿಗೆ ತೋರಿಸುತ್ತಿದ್ದಾರೆ. ಯಾಕೆಂದರೆ, ಜಗತ್ತಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಈಗ ಭಾರತೀಯನಾಗಿದ್ದಾನೆ. ಅವರು ಬೇರೆ ಯಾರು ಅಲ್ಲ, ಅವರೇ ರಿಲಯನ್ಸ್ ಕಂಪೆನಿಯ ಮುಖೇಶ್ ಅಂಬಾನಿ.

ಇಲ್ಲಿವರೆಗೆ ಜಗತ್ತಿನ ಅತಿದೊಡ್ಡ ಶ್ರೀಮಂತ ಸ್ಥಾನದಲ್ಲಿ ಕುಳಿತಿದ್ದ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಬಿಲೆನಿಯರ್ ಮುಖೇಶ್ ಅಂಬಾನಿ ಆ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಬಿಲ್ ಗೇಟ್ಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಎರಡನೇ ಸ್ಥಾನಕ್ಕೆ ಮ್ಯಾಕ್ಸಿಕನ್ ವ್ಯಾಪಾರಿ ದೈತ್ಯ ಕಾರ್ಲಸ್ ಸ್ಲಿಮ್ ಹಲು ಮತ್ತು ಇನ್ವೆಸ್ಟ್‌ಮೆಂಟ್ ಗುರು ವಾರೆನ್ ಬಫೆಟ್ ಜಿಗಿದಿದ್ದಾರೆ.


ಇಲ್ಲಿ ತುಪ್ಪದ ಕಾಲುವೆಯೇ ಹರಿಯುತ್ತದೆ...!

ನೀವು ಎಂದಾದರೂ ತುಪ್ಪ ಹೊಳೆಯಾಗಿ ಹರಿಯುವುದನ್ನು ಕೇಳಿದ್ದೀರಾ? ನಿಮ್ಮ ಉತ್ತರ ಖಂಡಿತವಾಗಿ ಇಲ್ಲ ಎಂದು ಬರುತ್ತದೆ ಎಂಬುದು ಗೊತ್ತು. ನಮ್ಮ ಹಿರಿಯರು ಹೇಳುತ್ತಿದ್ದರು ಒಂದು ಕಾಲದಲ್ಲಿ ಹಾಲು ತುಪ್ಪದ ಹೊಳೆ ಹರಿಯುತ್ತಿತ್ತು ಅಂತ... ಅದನ್ನು ಕೇಳಿದ್ದಿದೆ.

ಗುಜರಾತ್‌ನ ರೂಪಾಲ್ ಪಲ್ಲಿ ಎಂಬ ಕುಗ್ರಾಮದಲ್ಲಿ ಪ್ರತಿವರ್ಷ ನವರಾತ್ರಿಯ ಕೊನೆಯ ದಿನದಂದು ತುಪ್ಪದ ಹೊಳೆ ಇಂದಿಗೂ ಹರಿಯುತ್ತಿದೆ. ಈ ವರ್ಷದ ನವರಾತ್ರಿಯ ಕೊನೆಯ ದಿನದಂದು ಆರು ಲಕ್ಷ ಕಿಲೋ ತುಪ್ಪ ನದಿ ರೂಪದಲ್ಲಿ ಹರಿದಿದೆ.


Saturday, October 27, 2007

ವೆಬ್‌ದುನಿಯಾ ವಾರದ ಬ್ಲಾಗ್: ನೆನಪು ನೇವರಿಕೆ

ಬ್ಲಾಗ್ ಅವಕಾಶಗಳ ಫಲವಾಗಿ ಕುಡಿಯೊಡೆದ ಪ್ರತಿಭೆಗಳಲ್ಲಿ ಸಿಂಧು ಕೂಡ ಒಬ್ಬರು. ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ ಎಂದು ತಲೆಬರಹ ಹಾಕಿಕೊಂಡು ನೆನಪು ನೇವರಿಕೆ (http://nenapu-nevarike.blogspot.com/) ನಡೆಸುತ್ತಿರುವ ಸಿಂಧು ಅವರು ಯುವ ಬ್ಲಾಗಿಗರಿಗೆ ಆದರ್ಶಪ್ರಾಯ.

ಈಗಿನ ಅನೇಕ ಯುವ ಬರಹಗಾರರು ತಮ್ಮ ಲೇಖನಗಳಲ್ಲಿ ರವಿ ಬೆಳಗೆರೆಯವರ ಬರಹಶೈಲಿಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ರವಿ ಬೆಳಗೆರೆಯಂತೆ ಸಾಮಾನ್ಯ ಇಂಗ್ಲೀಷ್ ಪದಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಬೀಗುತ್ತಾರೆ. ಆದರೆ ಬೆಳಗೆರೆ ಲೇಖನಗಳಲ್ಲಿರುವ ವಾಕ್ಯಗಳ ಸರಳತೆ ಮತ್ತು ತೀಕ್ಷ್ಣತೆ, ಅವರ ನಿರೂಪಣಾ ಶೈಲಿ, ಅವರು ಮನಸ್ಸಿಗೆ ನಾಟುವ ಕ್ಷಣಗಳಿಗೆ ಹೆಚ್ಚು ಒತ್ತು ನೀಡಿ ಬರೆಯುವ ಪರಿ ನಿಜಕ್ಕೂ ಅನುಕರಣೀಯ. ದುರದೃಷ್ಟವಶಾತ್, ಯುವಬರಹಗಾರರಲ್ಲಿ ಇಂಗ್ಲೀಷ್ ಪದ ಬಳಕೆ ಮಾತ್ರವೇ ಅನುಕರಣೀಯವಾಗಿಬಿಟ್ಟಿರುತ್ತದೆ.


ನಾನು ಮಲಗಬೇಕು

ಪುಟ್ಟ ಆನೆಮರಿ ಬಹಾದುರ ಬಹಳ ಮರೆಯುವ ಮಗು. ಒಂದು ಸಲ ಅವನು ನೀರು ಕುಡಿಯುವುದು ಹೇಗೆ ಎಂಬುದನ್ನೇ ಮರೆತಿದ್ದ. ನೀರು ಕುಡಿಯಲು ನಿನ್ನ ಮೂಗು ಉಪಯೋಗಿಸಬೇಕು ಮಗೂ ಎಂದು ಅವನ ಅಮ್ಮ ಅವನಿಗೆ ಹೇಳಿದ್ದಳು.

ಈ ಸಲ ಬಹಾದುರನ ಅಮ್ಮ ಗೀತಾ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದರು. ಪುಟ್ಟ ಬಹಾದುರನಿಗೆ ಬಹಳ ನಿದ್ದೆ ಆದರೆ ನಿದ್ದೆ ಮಾಡುವುದು ಹೇಗೆ ಎಂಬುದೇ ನೆನಪು ಬರುತ್ತಿಲ್ಲ.


Wednesday, October 24, 2007

ಹೆಬ್ಬೆಟ್ಟು ಒತ್ತಿ ಭವಿಷ್ಯ ತಿಳಿಯಿರಿ!

ಭಾರತದಲ್ಲಿ ಅನೇಕ ವಿಧದ ಜ್ಯೋತಿಷ್ಯ ಪ್ರಕಾರಗಳಿವೆ. ಹಸ್ತ ಸಾಮುದ್ರಿಕ, ಸಂಖ್ಯಾಶಾಸ್ತ್ರ, ಗ್ರಹಕುಂಡಲಿ ಮುಂತಾದವುಗಳು ಪ್ರಮಖವಾದವುಗಳು. ನೂರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ನಾಡಿ ಜ್ಯೋತಿಷ್ಯ ಕೂಡ ಒಂದು.

ನಂಬಿದರೆ ನಂಬಿ ಬಿಟ್ಟರೆ ಬಿಡಿ ಪಯಣದಲ್ಲಿ ಈ ಬಾರಿ ನಾವು ವೈಧೀಶ್ವರಂ ದೇವಾಲಯಕ್ಕೆ ತಮ್ಮನ್ನು ಕರೆದುಕೊಂಡು ಹೋಗುತ್ತಿದ್ದೇವೆ. ವೈಧೀಶ್ವರಂ ಮಂದಿರದ ವೈಶಿಷ್ಠ್ಯ ಎಂದರೆ ಈ ದೇವಾಲಯದ ಸುತ್ತಲೂ ನೂರಾರು ಕುಟುಂಬಗಳಿವೆ. ಅವುಗಳಿಗೆ ಜ್ಯೋತಿಷ್ಯ ಹೇಳುವುದು ಜೀವಾನಾಧಾರ ವೃತ್ತಿ . ಅಂದ ಮಾತ್ರಕ್ಕೆ ಬೇಕಾ ಬಿಟ್ಟಿ ದುಡ್ಡು ಕೀಳುತ್ತಾರೆ ಎಂದು ತಿಳಿಯಬೇಕಾಗಿಲ್ಲ. ಅವರು ಹೇಳಿದ್ದು ನೂರಕ್ಕೆ ನೂರು ಸರಿಯಾಗಿದ್ದರೆ ಮಾತ್ರ ನೀಡಿದ ಸೇವೆಗೆ ದುಡ್ಡು ತೆಗೆದುಕೊಳ್ಳುತ್ತಾರೆ.


ಮರುಮೈತ್ರಿ ತಳಮಳ: ವಿದಳನೆಯತ್ತ ದಳ

ಇಬ್ಬರ ಜಗಳದಿಂದಾಗಿ ಕೋಲಾಹಲದ ಗೂಡಾಗಿರುವ ಕರ್ನಾಟಕ ರಾಜಕೀಯ ಮತ್ತೊಂದು ಮಗ್ಗುಲಿನತ್ತ ಹೊರಳುತ್ತಿದ್ದು, ಜಾತ್ಯತೀತ ಜನತಾ ದಳ ಒಡಕಿನ ಹಂತ ತಲುಪಿದೆ.

ಪಕ್ಷದ ಬಹುತೇಕ ಶಾಸಕರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ಬಂಡೆದಿದ್ದಾರೆ. ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರನ್ನು ನಾಯಕರನ್ನಾಗಿ ಘೋಷಿಸಿಕೊಂಡಿರುವ ಶಾಸಕರು, ಕಾಂಗ್ರೆಸ್ ಜತೆ ಮರು ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಸಿದ್ಧತೆ ನಡೆಸಿದ್ದಾರೆ.


Monday, October 22, 2007

ಪರಮ ಪಾವನೆ ಭಕ್ತವತ್ಸಲೆ ಕೊಲ್ಲೂರು ಶ್ರೀಮೂಕಾಂಬಿಕೆ

ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು, ಸೌಪರ್ಣಿಕಾ ತಟದಲ್ಲಿರುವ ವಾಸ್ತುಶಿಲ್ಪ ಆಧಾರಿತ ಶಾಸ್ತ್ರೋಕ್ತವಾದ ಮಧ್ಯಮ ಗಾತ್ರದ ಶಿಲಾಮಯ ಪುಣ್ಯಕ್ಷೇತ್ರ. ಇಲ್ಲಿ ಭಕ್ತ ವತ್ಸಲೆಯಾದ ಶ್ರೀದೇವಿಯು ಮೂಕಾಂಬಿಕೆಯ ರೂಪದಲ್ಲಿ ನೆಲೆಸಿ ಭಕ್ತ ಜನಕೋಟಿಯನ್ನು ಹರಸುತ್ತಿದ್ದಾಳೆ.

ವಿಶೇಷತೆ:


ಈ ಪುಣ್ಯ ಕ್ಷೇತ್ರವು ವಿದ್ಯಾದಶಮಿ ದಿನ ನಡೆಯುವ ಅಕ್ಷರಾಭ್ಯಾಸಕ್ಕೆ ಹೆಸರುವಾಸಿ. ದೇಶದೆಲ್ಲೆಡೆಯಿಂದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳಿಗೆ ಭಕ್ತಿಯ ತಾಣವಿದು. ತಮಿಳುನಾಡು ಮಾಜಿ ಮುಖ್ಯಮಂತ್ರಿ/ನಟ ಎಂಜಿಆರ್ ಅವರು ಈ ಕ್ಷೇತ್ರಕ್ಕೆ ಚಿನ್ನದ ಖಡ್ಗ ಒಪ್ಪಿಸಿದ್ದರೆ, ಸಂಗೀತ ನಿರ್ದೇಶಕ ಇಳಯರಾಜ ಅವರು ಕೋಟಿ ರೂ. ಮೌಲ್ಯದ ವಜ್ರ ಖಚಿತ ಹಸ್ತ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಒಂದು ಆನೆಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರಲ್ಲದೆ ಚೆನ್ನೈನಿಂದ ಕೊಲ್ಲೂರಿಗೆ ಬಸ್ ಸೌಲಭ್ಯವನ್ನೂ ಕಲ್ಪಿಸಿದ್ದಾರೆ. ಉದ್ಯಮಿ ವಿಜಯ ಮಲ್ಯ ಅವರು ಧ್ವಜಸ್ಥಂಬಕ್ಕೆ ಚಿನ್ನದ ಹೊದಿಕೆ ಮಾಡಿಸಿದ್ದಾರೆ. ನಾಲ್ಕು ಕೋಟಿ ರೂ. ಅಂದಾಜು ವೆಚ್ಚದ ಸ್ವರ್ಣ ರಥ ಇಲ್ಲಿ ಗಮನ ಸೆಳೆಯುತ್ತದೆ. ಖ್ಯಾತ ಗಾಯಕ ಜೇಸುದಾಸ್ ಇಲ್ಲಿಯ ಪರಮ ಭಕ್ತರು. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಸೇರಿದಂತೆ ಇವರೆಲ್ಲರೂ ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.


Friday, October 19, 2007

ವೆಬ್‌ದುನಿಯಾ ವಾರದ ಬ್ಲಾಗ್: ಏನ್ ಗುರು

ಇದೀಗ ಕನ್ನಡ ಬ್ಲಾಗ್ ಲೋಕ ಸಮೃದ್ಧಗೊಳ್ಳುತ್ತಿರುವಂತೆ ಬ್ಲಾಗ್ ವೈವಿಧ್ಯತೆಗಳೂ ಕಣ್ಣಿಗೆ ಬೀಳುತ್ತಿವೆ. ಕನ್ನಡ ಬ್ಲಾಗ್‌ಗಳಲ್ಲಿ ಪ್ರಸಕ್ತ ಆತ್ಮಕಥನಗಳೇ ಹೆಚ್ಚಾಗಿರುವುವಾದರೂ ಕೆಲವಾರು ಬ್ಲಾಗುಗಳು ಸರಿಯಾದ, ಒಂದು ಉದ್ದೇಶವಿರುವ ಜಾಡು ಹಿಡಿದುಕೊಂಡಿವೆ. ಇಂತಹ ಬ್ಲಾಗುಗಳಲ್ಲಿ 'ಏನ್ ಗುರು' (http://enguru.blogspot.com/) ಎಂಬ ಬ್ಲಾಗ್ ಕೂಡ ಒಂದು.

ಕನ್ನಡಪರ ಕಾಳಜಿ ಪ್ರಮುಖವಾಗಿ ವ್ಯಕ್ತವಾಗುವ 'ಏನ್ ಗುರು' ಎಂಬ ಬ್ಲಾಗ್ ಹೆಸರಿನಿಂದಲೇ ಅದರಲ್ಲಿ ಯಾವ ಶೈಲಿಯ ಬರಹಗಳು ಇರುತ್ತವೆ ಎಂಬುದನ್ನು ಅಂದಾಜಿಸಬಹುದು. "ಏನ್ ಗುರು" ಬ್ಲಾಗಿಗರು ತಮ್ಮ ಕನ್ನಡಪರ ವಾದವನ್ನು ಸ್ವಲ್ಪ ಉಗ್ರವಾಗಿಯೇ ಪ್ರತಿಭಟಿಸುತ್ತಾರಾದರೂ ನಿಮಗೆ ಎಲ್ಲೂ ಅತಿ ಅನಿಸುವುದಿಲ್ಲ, ಅಥವಾ ತರ್ಕ ಮೀರಿ ದೂರ ಹೋಗುವುದಿಲ್ಲ.


ಮೈಸೂರು ದಸರಾ

ಮೈಸೂರು ದಸರಾ ವೈಭವದ ರಸಮಯ ಕ್ಷಣಗಳ ವೀಕ್ಷಣೆ ಲಭ್ಯ. ವಿಡಿಯೋಗಾಗಿ ನಿರೀಕ್ಷಿಸಿ.

ಪೋಟೋಗ್ಯಾಲರೀಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಕ್‌ ದೇಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ

ಶಮಿತ್ ಅಮಿನ್ ನಿರ್ಧೇಶನ ಮತ್ತು ಶಾಹರುಖ್ ಖಾನ್ ಅಭಿನಯದ ಬಾಲಿವುಡ್ ಸುಪರ್ ಹಿಟ್ ಚಿತ್ರ ಚಕ್ ದೇ ಇಂಡಿಯಾ ಈ ಬಾರಿಯ ಆಸ್ಟ್ರೇಲಿಯನ್ ಇಂಡಿಯನ್ ಫಿಲ್ಮ್ ಪೆಸ್ಟಿವಲ್‌ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಆಸ್ಟ್ರೇಲಿಯದ ನೆಲದಲ್ಲಿ ನಡೆದ ವಿಶ್ವಕಪ್ ಹಾಕಿ ಟೂರ್ನಿಯ ಕಥಾ ಚಿತ್ರವನ್ನು ಒಳಗೊಂಡಿರುವ ಚಿತ್ರವು ಸಿಡ್ನಿ, ಮೇಲ್ಬೋರ್ನ್‌ಗಳಲ್ಲಿ ಚಿತ್ರಿಕರಣಗೊಂಡಿದೆ. ಚಕ್ ದೇ ಇಂಡಿಯಾ ಚಿತ್ರವು 2002 ರ ಮ್ಯಾಂಚೆಸ್ಟರ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಗೆಲುವಿನ ಆಧಾರದ ಮೇಲೆ ನಿರ್ಮಾಣವಾಗಿದೆ.


Thursday, October 18, 2007

ನಟ ಚಿರಂಜೀವಿ ಮಗಳ ಸಿನಿಮಯ ಮದುವೆ

ಆಂಧ್ರಪ್ರದೇಶದಾದ್ಯಂತ ತಮ್ಮ ಅದ್ಭುತ ನಟನೆಯಿಂದ ಸೂಪರ್ ಸ್ಟಾರ್ ಪಟ್ಟ ಪಡೆದ ನಟ ಚಿರಂಜೀವಿಯ ಮಗಳು ಶ್ರೀಜಾ ಮನೆಯಿಂದ ಓಡಿ ಹೋಗಿ ತನ್ನ ಸ್ನೇಹಿತ ಶಿರಿಶ್ ಭಾರಧ್ವಜ್ ಅವರನ್ನು ನಗರದ ಆರ್ಯ ಸಮಾಜದ ಮಂದಿರದಲ್ಲಿ ಮದುವೆಯಾಗಿದ್ದಾರೆ.

ನಮ್ಮ ಪ್ರೇಮಕ್ಕೆ ತಂದೆ ತಾಯಿಗಳ ವಿರೋಧ ವ್ಯಕ್ತಪಡಿಸಿದರಲ್ಲದೇ ಒಂದು ವರ್ಷಗಳ ಕಾಲ ಮನೆಯಲ್ಲಿ ಕೂಡಿಹಾಕಿದ್ದರು ಎಂದು ಶ್ರೀಜಾ ಆರೋಪಿಸಿದ್ದಾರೆ.


ಕರೀನಾ ಸೈಫ್ ಪ್ರೇಮದ ಅಲೆಯಲ್ಲಿ

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ರಾಜಕುವರ ಸೈಫ್ ಅಲಿಖಾನ್ ಬಾಲಿವುಡ್ ಬೆಡಗಿ ಖ್ಯಾತ ನಟಿ ಕರೀನಾ ಕಪೂರ್ ಅವರೊಂದಿಗೆ ಪ್ರೇಮಸಂಬಂಧವಿದೆ ಎಂದು ಕರೀನಾಳ ಸಮ್ಮುಖದಲ್ಲಿ ಸೈಫ್ ಲಕ್ಮೆ ಫ್ಯಾಶನ್ ವೀಕ್ ಸಮಾರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಸುದ್ದಿಗಳ ಉಹಾಪೋಹಗಳಿಗೆ ತೆರೆ ಎಳೆಯಲು ಬಯಸಿದ್ದೆನೆ ಎಂದು ಹೇಳಿದ್ದಾರೆ. ಬಾಲಿವುಡ್ ಉದ್ಯಮದ ಹೆಸರಾಂತ ಫ್ಯಾಶನ್ ಡಿಜೈನರ್ ಮನೀಶ್ ಮಲ್ಹೋತ್ರಾ ಅವರು ಆಯೋಜಿಸಿದ ಫ್ಯಾಶನ್ ಕರೀನಾ ಮತ್ತು ಸೈಫ್ ಪರಸ್ಪರ ಆಲಿಂಗಿಸಿಕೊಂಡು ಭಾಗಿಯಾಗಿರುವುದು ಎಲ್ಲರ ಹುಬ್ಬೇರಲು ಕಾರಣವಾಗಿದೆ.


Wednesday, October 17, 2007

ನಟಿಗೆ ಕಪಾಳಮೋಕ್ಷ: ನಿರ್ದೇಶಕನಿಗೆ ನಿಷೇಧ

ಶೂಟಿಂಗ್ ವೇಳೆ ನಟಿಯೊಬ್ಬಳ ಕಪಾಳಮೋಕ್ಷ ಮಾಡಿದಲ್ಲಿ, ಆಕೆಯಿಂದ ಅತ್ಯುತ್ತಮ ನಟನೆ ನಿರೀಕ್ಷಿಸಬಹುದು ಎಂಬ ಚಿತ್ರ ನಿರ್ದೇಶಕರೊಬ್ಬರ ಲೆಕ್ಕಾಚಾರ ಅವರಿಗೇ ಮುಳುವಾಗಿದೆ.ಈ ಘಟನೆ ನಡೆದದ್ದು ಮಿರುಗಂ (ಮೃಗಂ) ಚಿತ್ರದ ಚಿತ್ರೀಕರಣದ ಸಂದರ್ಭ ಎನ್ನುವುದು ಮಾತ್ರ ಕಾಕತಾಳೀಯ.

ನವನಟಿ ಪದ್ಮಪ್ರಿಯಾ ಎಂಬಾಕೆಗೆ ಹೊಡೆದಿದ್ದಕ್ಕಾಗಿ ಚಿತ್ರ ನಿರ್ದೇಶಕ ಸಾಮಿ ಎಂಬವರು ಒಂದು ವರ್ಷ ಕಾಲ ಯಾವುದೇ ಚಿತ್ರ ನಿರ್ದೇಶಿಸುವುದನ್ನು ತಮಿಳು ಚಿತ್ರೋದ್ಯಮ ನಿಷೇಧಿಸಿದೆ.


ಅಕ್ಷಯ್-ಕತ್ರೀನಾ ಜೋಡಿಯ ಮೋಡಿ

ಅಕ್ಷಯ್ ಕುಮಾರ್ ಯಾವಾಗಲೂ ಯಾವುದೇ ನಾಯಕಿ ನಟಿ ಜತೆ ನಟಿಸುತ್ತಲೇ ಇರುತ್ತಾರೆ. ವೃತ್ತಿ ಜೀವನದ ಆರಂಭದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಜತೆ ಸೇರಿ ಸಾಕಷ್ಟು ಚಿತ್ರದಲ್ಲಿ ಪಾಲ್ಗೊಂಡಿದ್ದರು.

ಆನಂತರ ಅಕ್ಷಯ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿಯ ಹಲವು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಯಶ ಕಂಡವು. ಅಕ್ಷಯ್ ಮತ್ತು ಪ್ರಿಯಾಂಕಾ ಜೋಡಿಯು ತೀರಾ ಹತ್ತಿರವಾಗುತ್ತಿದೆ ಎಂಬ ಸುದ್ದಿ ಟ್ವಿಂಕಲ್ ಖನ್ನಾ ಕಿವಿಗೆ ಬಿದ್ದಾಗ, ಆಕೆ ಅಕ್ಷಯ್ ಕುಮಾರ್ ಪ್ರಿಯಾಂಕಾ ಜತೆ ನಟಿಸುವ ಸಾಧ್ಯತೆಯ ಮಾರ್ಗ ಬಂದ್ ಮಾಡಿಸಿದರು.


Tuesday, October 16, 2007

ರಾಮನಿಗಾಗಿ ಮಿಡಿಯಿತೇ ಶಿವಲಿಂಗ ?

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಲಖ್ನೋದಲ್ಲಿನ ಶಿವಲಿಂಗವೊಂದು ರಾಮ ಕಟ್ಟಿದ ಸೇತುವೆಗೆ ಧಕ್ಕೆ ಬರುವ ಸೂಚನೆ ಬರುತ್ತಲೇ ತನ್ನ ಬಣ್ಣ ಬದಲಾಯಿಸಿದೆ. ಹಾಗಂತ ಜನಾ ಹೇಳತೊಡಗಿದ್ದಾರೆ. ಲಖ್ನೋದಲ್ಲಿನ ಶಿವಲಿಂಗ ಬಣ್ಣ ಬದಲಾಯಿಸುವ ಮೊದಲು ವಾರಾಣಸಿಯಲ್ಲಿನ ಶಿವಲಿಂಗಗಳು ತಮ್ಮ ಬಣ್ಣ ಬದಲಾಯಿಸಿದ್ದವು. ಒಂದೇ ದಿನದಲ್ಲಿ ಎಲ್ಲ ಲಿಂಗಗಳ ಬಣ್ಣ ಬದಲಾಗಿದ್ದು, ಎಲ್ಲರ ಹುಬ್ಬುಗಳು ಮೇಲೇರುವಂತೆ ಮಾಡಿವೆ.

ಕೆಲ ವರ್ಷಗಳ ಇಂತಹುದೇ ಒಂದೆರಡು ಘಟನೆಗಳು ನಡೆದಿದ್ದವು. ಮೊದಲು ಗಣಪತಿ ಹಾಲು ಕುಡಿದಿದ್ದು, ನಂತರ ಮುಂಬೈನಲ್ಲಿ ಸಮುದ್ರದ ನೀರು ಸಿಹಿಯಾಗಿದ್ದು, ವಿಚಿತ್ರ ಘಟನೆಗಳು.

Monday, October 15, 2007

ವಿಶಿಗೆ ಕಿರುಕುಳದ ಸ್ವಾಗತ

ವಿಶ್ವಚಾಂಪಿಯನ್ ಪಟ್ಟ ಗೆದ್ದು ಸ್ವದೇಶಕ್ಕೆ ಮರಳಿದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಅವರಿಗೆ ಅದ್ದೂರಿಯ ಸ್ವಾಗತ ದೊರೆಯುವ ಬದಲು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಕಿರುಕುಳ ಸ್ವಾಗತ ಸಿಕ್ಕಿತು.

ಭಾರತದ ಪ್ರಮುಖ ಐಟಿ ಶಿಕ್ಷಣ ಸಂಸ್ಥೆ ಆನಂದ್ ಅವರ ಸ್ವಾಗತದ ಪ್ರಾಯೋಜಕತ್ವದ ಜವಾಬ್ದಾರಿ ವಹಿಸಿಕೊಂಡಿತ್ತು. ವಿಶೇಷ ಎಂದರೆ ಅದೇ ಸಂಸ್ಥೆಯ ಪ್ರಮುಖ ರಾಯಭಾರಿಯಾಗಿ ಆನಂದ್ ಗುರುತಿಸಿಕೊಂಡಿದ್ದಾರೆ.

Saturday, October 13, 2007

ನಮಾಜ್‌ಗಿಂತ ಮೊದಲು ಸದಕ್-ಎ-ಫಿತ್ರ್ ಪೂರ್ತಿಗೊಳಿಸಿ

ರಂಜಾನ್ ಹಬ್ಬ ಮಾನವರೆಲ್ಲರೂ ಸರಿಸಮಾನರು ಎನ್ನುವ ಸಂದೇಶವನ್ನು ಸಾರುತ್ತದೆ. ಜನರು ಪರಸ್ಪರ ಸಂತೋಷದಲ್ಲಿ ಭಾಗಿಯಾಗಿ, ಕಷ್ದದಲ್ಲಿದ್ದವರಿಗೆ ತಮ್ಮಿಂದ ಆದಷ್ಟು ಸಹಾಯ ಹಸ್ತ ನೀಡಿ ಪ್ರತಿಯೊಬ್ಬ ಬಡವರು ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುತ್ತದೆ.

ಪೈಗಂಬರ್ ಹಜರತ್ ಮೊಹಮ್ಮದ್ ಅವರು ಸದಕ್- ಎ- ಫಿತ್ರ್ ಅನ್ನು ಅವಶ್ಯಕ ದಾನವೆಂದು ಕರೆದಿದ್ದಾರೆ. ಈ ದಾನವನ್ನು ರಂಜಾನ್ ಉಪವಾಸ ಮುಗಿದ ಮೇಲೆ ನೀಡಲಾಗುತ್ತದೆ. ಈ ದಾನವನ್ನು ಅನ್ಯಾಯ ಮತ್ತು ಅನವಶ್ಯಕ ಮಾತುಗಳಿಂದ ದೂರವಿರಲು ನೀಡಲಾಗುತ್ತದೆ.


ದಸರಾ ಫೋಟೋ ಗ್ಯಾಲರಿಗೆ ಭೇಟಿ ನೀಡಿ


Thursday, October 11, 2007

ರೋಗಿಯ ಹೃದಯದಲ್ಲಿ ಸ್ಕ್ರೂ ಬಿಟ್ಟ ವೈದ್ಯರು

ರಾಷ್ಟ್ರದ ಪ್ರಮುಖ ವೈದ್ಯ ವಿಜ್ಞಾನ ಸಂಸ್ಥೆ ಎಂದು ಪ್ರಖ್ಯಾತಿ ಪಡೆದಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ರೋಗಿಯೊಬ್ಬನ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದ ಕಾರಣ ರೋಗಿಯ ಹೃದಯದಲ್ಲಿ ಸ್ಕ್ರೂ ಒಂದು ಉಳಿದ ಪರಿಣಾಮವಾಗಿ ಮೃತಪಟ್ಟಿದ್ದು. ಶಸ್ತ್ರಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಎಸಗಿದ ವೈದ್ಯನನ್ನು ಅಮಾನತುಗೊಳಿಸಲಾಗಿದೆ.

ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ಹೃದಯ ರೋಗಿಯೋರ್ವನ ಬೈಪಾಸ್ ಶಸ್ತ್ರ ಚಿಕಿತ್ಸೆ ನೆರೆವೆರಿಸುವ ಸಮಯದಲ್ಲಿ ಹೃದಯದಲ್ಲಿ ಸ್ಕ್ರೂ ಒಂದನ್ನು ಬಿಟ್ಟು ರೋಗಿಯ ಸಾವಿಗೆ ಕಾರಣರಾಗಿದ್ದಾರೆ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತಕ್ಕೆ ಹೀನಾಯ ಸೋಲು

ಭಾರತೀಯ ಬ್ಯಾಟ್ಸ್‌ಮನ್‌ಗಳ ದಯೆ, ಮಿಚೆಲ್ ಜಾನ್ಸನ್ ಆಶಿರ್ವಾದ ಮತ್ತು ಅಡಂ ಗಿಲ್‌ಕ್ರಿಸ್ಟ್ ಬೆಂಬಲದ ಮೇಲೆ ಟೀಮ್ ಇಂಡಿಯಾ ತಂಡವು ಆಸ್ಟ್ರೇಲಿಯಾ ವಿರುದ್ಧ ವಡೋದರಾದಲ್ಲಿ ನಡೆದ ಸರಣಿಯ ಐದನೆ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಭಾರಿ ಅಂತರದಿಂದ ಸೋಲು ಅನುಭವಿಸಿತು.

ಆಸ್ಟ್ರೇಲಿಯದ ಆಡಂ ಗಿಲ್‌ಕ್ರಿಸ್ಟ್ ಅಜೇಯ (79) ಮ್ಯಾಥು ಹೆಡನ್ (29) ಮತ್ತು ರಿಕಿ ಪಾಂಟಿಂಗ್ ಅವರ ಅಜೇಯ 39 ರನ್‌ಗಳ ನೆರವಿನಿಂದ ಭಾರತ ನೀಡಿದ 149 ರನ್‌ಗಳ ಸವಾಲನ್ನು 25.5 ಓವರುಗಳಲ್ಲಿ ತಲುಪಿ ಸರಣಿಯಲ್ಲಿ 3-1 ರ ಮುನ್ನಡೆ ಸಾಧಿಸಿತು.


ಸಿಕ್ಸರ್‌ನಂತೆ ನಿತೀಶ್‌ರನ್ನು ಎಸೆಯುವೆ:ಲಾಲೂ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ ಆರ್‌ಜೆಡಿ ವರಿಷ್ಠ ಮತ್ತು ರೈಲ್ವೆ ಸಚಿವ ಲಾಲು ಪ್ರಸಾದ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಗ್ರಹಿಸಿದ್ದು, ಚುನಾವಣೆ ನಡೆದರೆ ಅವರನ್ನು ಬೌಂಡರಿಯ ಆಚೆ ಸಿಕ್ಸರ್ ಬಾರಿಸಿದಂತೆ ಎಸೆಯುವುದಾಗಿ ಅವರು ಹೇಳಿದರು.

ವಿರೋಧಿಗಳನ್ನು ಶೂನ್ಯಕ್ಕೆ ಔಟ್ ಮಾಡುವುದಾಗಿ ಜಂಬ ಕೊಚ್ಚಿಕೊಳ್ಳುವ ನಿತೀಶ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಬೌಂಡರಿಯಾಚೆ ಹೋಗಲಿದ್ದಾರೆ ಎಂದು ಹೇಳಿದರು.

Tuesday, October 9, 2007

ಹದಿನೆಂಟು ಸಾವಿರದ ಗಡಿ ದಾಟಿದ ಸೂಚ್ಯಂಕ

ಮಂಗಳವಾರದ ಪ್ರಾರಂಭಿಕ ವಹಿವಾಟಿನಲ್ಲಿ ರಾಜಕೀಯ ಅಸ್ಥಿರತೆಯ ಕಾರಣ ಕೆಲಕಾಲ ಮುಗ್ಗರಿಸಿದ್ದ ಮುಂಬೈ ಶೇರು ವ್ಯವಹಾರ ನಂತರದ ವಹಿವಾಟಿನಲ್ಲಿ ಭಾರಿ ಚೇತರಿಕೆಯೊಂದಿಗೆ 18 ಸಾವಿರದ ಗಡಿಯನ್ನು ದಾಟಿತು.

ಒಟ್ಟು 370 ಏರಿಕೆಗೆ ಭಾರಿ ಪ್ರಮಾಣದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಅಸಕ್ತಿ ಕಾರಣ ಎನ್ನಲಾಗಿದೆ. ಮಂಗಳವಾರದಂದು ಶೇರು ಸೂಚ್ಯಂಕ ಮೊದಲ ಬಾರಿಗೆ 18 ಸಾವಿರದ ಗಡಿಯನ್ನು ತಲುಪಿ ಕೆಳಗೆ ಇಳಿಯಿತು.


ತಪ್ಪು ಮಾಡಿದೆ, ಕ್ಷಮಿಸಿ: ಕುಮಾರಸ್ವಾಮಿ

ಅಧಿಕಾರ ಹಸ್ತಾಂತರ ವಿಚಾರದಲ್ಲಿ ತಪ್ಪು ಮಾಡಿದೆ, ರಾಜ್ಯದ ಜನತೆ ನನ್ನನ್ನು ಕ್ಷಮಿಸುತ್ತಾರೆ ಎಂಬ ಭಾವನೆ ನನ್ನದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನು ತಪ್ಪು ಮಾಡಿದ್ದು ನಿಜ. ಆದರೆ ತನ್ನ ಹಾಗೂ ತಮ್ಮ ಪಕ್ಷದ ಮೇಲೆ ಮಾತ್ರ ತಪ್ಪನ್ನು ಹೊರಿಸುವುದನ್ನು ನಾನು ಒಪ್ಪಲಾರೆ. ಬಿಜೆಪಿಯೂ ಈ ವಿಚಾರದಲ್ಲಿ ತಪ್ಪು ಮಾಡಿದೆ. ಸಂದರ್ಭ ಬಂದಾಗ ಇದನ್ನು ಪ್ರಕಟಿಸುತ್ತೇನೆ ಎಂದರು.



Saturday, October 6, 2007

ಇದು ರಾಜಕೀಯ ಕಣ್ರೀ

ಮಾಡಿದರೆ ರಾಜಕೀಯ ಗೌಡರ ತರಹ ಮಾಡಬೇಕು. ತಂದೆಗೆ ತಕ್ಕ ಮಗ ಈ ಕುಮಾರಸ್ವಾಮಿ. ಅಂದು ರಾಜಕೀಯದಲ್ಲಿ ಮೂಲೆಗೆ ಬಿದ್ದ ಗೌಡರನ್ನು ಹೆಗಡೆ ಎತ್ತಿದ್ದೇ ದೊಡ್ಡ ತಪ್ಪಾಯಿತು. ಅಂದು ಗೌಡರ ಮುಖ್ಯಮಂತ್ರಿ ಪದವಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೆಗಡೆಗೆ ಬಿದ್ದ ಧರ್ಮದೇಟುಗಳು ಇಂದಿಗೂ ಮನಸ್ಸಿನಿಂದ ದೂರವಾಗಿಲ್ಲ. ಅದು ಮಾಡಿದ್ದು ಯಾರೋ ಅನ್ನುವುದು ಇಂದು ಅಸಂಗತ.

ಅಂತಹ ವ್ಯಕ್ತಿ ಇಂದು ಯಡಿಯೂರಪ್ಪನವರಿಗೆ; ಅದೃಷ್ಟಕ್ಕೆ ಆ ಧರ್ಮದೇಟು ನೀಡಿಲ್ಲ. ನೀಡಬೇಕಾದ ಜಾಗದಲ್ಲಿ ಏನು ನೀಡಬೇಕೊ ಅದನ್ನು ನೀಡಿಯಾಗಿದೆ. ಅಧಿಕಾರಕ್ಕೆ ಹಪಹಪಿಸುತ್ತಿದ್ದವರಿಗೆ ಅಧಿಕಾರ ಅಷ್ಟು ಸುಲಭದ ತುತ್ತಲ್ಲ. ರಾಮನಾಮ ಜಪಿಸಿದರೆ ಸಾಲದು. ರಾಮನಂತೆ ಇದ್ದರೂ ಸಾಲದು. ಅದಕ್ಕೆ ಇನ್ನು ಏನೇನೊ ಆಗಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಶಹಬ್ಬಾಸ್ ಕುಮಾರಸ್ವಾಮಿ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಬೆಂಬಲ ವಾಪಸ್: ಸರಕಾರ ಪತನ ಕ್ಷಣಗಣನೆ

"ವಚನಭ್ರಷ್ಟ" ಜೆಡಿಎಸ್ ಅಧಿಕಾರ ಹಸ್ತಾಂತರಿಸಲು ಅಸಹಕಾರ ತೋರಿದ್ದು, ಅದರ ಜತೆಗಿನ ಮೈತ್ರಿ ಮುರಿಯಲು ಬಿಜೆಪಿ ನಿರ್ಧರಿಸಿದೆ. ಒಮ್ಮೆ ಜೆಡಿಎಸ್ ಜತೆ ಕೈಜೋಡಿಸಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್, ಮರು ಮೈತ್ರಿಗೆ ನಿರ್ಧಾರ ಮಾಡದೇ ಹೋದಲ್ಲಿ ಇದರೊಂದಿಗೆ ರಾಜ್ಯದಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.

ಇದರೊಂದಿಗೆ 20 ತಿಂಗಳ ಬಿಜೆಪಿ-ಜೆಡಿಎಸ್ ಮದುವೆ ಮುರಿದುಬೀಳುತ್ತಿದ್ದು, ರಾಜ್ಯ ರಾಜಕೀಯದಲ್ಲಿನ ಬಿಕ್ಕಟ್ಟು ಮತ್ತು ಪ್ರಹಸನಕ್ಕೆ ಅಂಕದ ಪರದೆ ಬೀಳಲಿದೆ.

ಚುನಾವಣೆ ಎದುರಿಸಲು ನಾವು ಸಿದ್ಧ ಎಂದು ಘೋಷಿಸಿರುವ ಬಿಜೆಪಿ, ಭಾನುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಾಜಭವನಕ್ಕೆ ತೆರಳಿ ಬೆಂಬಲ ಹಿಂತೆಗೆದುಕೊಳ್ಳಲಿದೆ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Friday, October 5, 2007

ಕ್ರಿಕೆಟ್ : ಭಾರತ ವಿರುದ್ಧ ಆಸ್ಟ್ರೇಲಿಯಾ ಲೈವ್ ಸ್ಕೋರ್ ಕಾರ್ಡ್

ಹೈದರಾಬಾದ್ , ಶುಕ್ರವಾರ, 5 ಅಕ್ಟೋಬರ್ 2007( 09:30 IST )
ಟಾಸ್ ಗೆದ್ದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ವಿಕೆಟ್ ನಷ್ಟವಿಲ್ಲದೇ ಅದು 4.2 ಓವರುಗಳಲ್ಲಿ 28 ರನ್ ಮಾಡಿದೆ. ಕ್ರೀಸ್‌ನಲ್ಲಿರುವ ಅಡಂ ಗಿಲ್‍ಕ್ರಿಸ್ಟ್ (9), ಮ್ಯಾಥು ಹೆಡನ್ (18) ರನ್ ಮಾಡಿದ್ದಾರೆ.ಸ್ಕೋರ್ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.

Thursday, October 4, 2007

ಸಿಎಂ ಮನೆಯಲ್ಲಿ ಜೆಡಿಎಸ್ ಮಹತ್ವದ ಸಭೆ

ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ವಿವಾದಕ್ಕೆ ಸಂಬಂಧಿಸಿ ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯವರ ಮನೆಯಲ್ಲಿ ಜಾತ್ಯತೀತ ಜನತಾ ದಳದ ತುರ್ತು ಸಭೆ ಆರಂಭಗೊಂಡಿದೆ. ಮೈತ್ರಿಪಕ್ಷಗಳ ನಡುವೆ ಬಿಕ್ಕಟ್ಟು ನಡೆದಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.

ಒಂದೆಡೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರೇ ಮುಂದುವರಿಯಬೇಕು ಎಂದು ಜೆಡಿಎಸ್ ಪಕ್ಷದ ಬಹುತೇಕ ಶಾಸಕರು ಪಟ್ಟು ಹಿಡಿದಿದ್ದು, ಇದು ಬಿಜೆಪಿಗೆ ಅಧಿಕಾರ ಹಸ್ತಾಂತರವನ್ನು ಸುಲಭವಾಗಿ ನಿರಾಕರಿಸುವ ಒಂದು ತಂತ್ರ ಎಂದೇ ಹೇಳಲಾಗುತ್ತಿದೆ.


ಋಷಿ ಕಪೂರ್ ಪುತ್ರ 'ಸಾಂವರಿಯಾ' ಹೀರೋ

ಕಪೂರ್ ಕುಟುಂಬದಿಂದ ಬಂದವನೆಂಬ ಹೆಮ್ಮೆ: ರಣಬೀರ್ ಕಪೂರ್ ಋಷಿ ಕಪೂರ್ ಪುತ್ರ ರಣಬೀರ್ ಕಪೂರ್ ಅವರು 'ಸಾಂವರಿಯಾ' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಜಯ್ ಲೀಲಾ ಭನ್ಸಾಲಿಯಂತಹ ಖ್ಯಾತ ನಿರ್ದೇಶಕ ಇರುವ ಈ ಚಿತ್ರ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ನವೆಂಬರ್ 9ರಂದು ಈ ಚಿತ್ರ ತೆರೆ ಕಾಣಲಿದೆ. ಈ ಬಗ್ಗೆ ರಣಧೀರ್ ಕಪೂರ್ ಜತೆಗೆ ಮಾತುಕತೆಯ ತುಣುಕುಗಳು ಇಲ್ಲಿವೆ:

ಆರ್‌ಕೆ ಬ್ಯಾನರ್ ಈಗಾಗಲೇ ದೊಡ್ಡ ದೊಡ್ಡ ಚಿತ್ರಗಳನ್ನು ನೀಡಿದೆ. ನಿಮ್ಮ ಪರಿವಾರದಲ್ಲೇ ಹಲವಾರು ಚಿತ್ರ ನಿರ್ದೇಶಕರಿದ್ದಾರೆ. ಹಾಗಿದ್ದೂ ಹೊರಗಿನವರ ಬ್ಯಾನರ್‌ನಡಿಯಲ್ಲೇ ನೀವು ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದೇಕೆ?


Wednesday, October 3, 2007

ಗಡುವಿನ ಗೊಡವೆ ಬೇಕಿಲ್ಲ: ಮುಖ್ಯಮಂತ್ರಿ

ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಅಂತಿಮ ಗಡುವು ವಿಧಿಸಲಾಗದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಮಧ್ಯರಾತ್ರಿಯವರೆಗೂ ನಡೆದ ಜೆಡಿಎಸ್ ಶಾಸಕಾಂಗ ಪಕ್ಷ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಚಿವರ ಕ್ರಮವನ್ನು ಟೀಕಿಸಿದರು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಜೆಡಿಎಸ್‌ಗೆ ಕಾಂಗ್ರೆಸ್ ಬಾಹ್ಯ ಬೆಂಬಲ?

ಹಸ್ತಾಂತರ ಪ್ರಹಸನ: ಬಿಜೆಪಿ ಸಚಿವರ ಸಾಮೂಹಿಕ ರಾಜೀನಾಮೆ

ಉಪಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಚಿವರು ಮಂಗಳವಾರ ರಾತ್ರಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದು, ಅಕ್ಟೋಬರ್ 5ರವರೆಗೆ ಕಾಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಸಚಿವರಿಗೆ ಸಲಹೆ ಮಾಡಿದ್ದಾರೆ.

ಯಡಿಯೂರಪ್ಪ ನೇತೃತ್ವದಲ್ಲಿ 18 ಸಚಿವರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ರಾತ್ರಿ 8.15ಕ್ಕೆ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Saturday, September 29, 2007

ವೆಬ್‌ದುನಿಯಾ ವಾರದ ಬ್ಲಾಗ್: ಋಜುವಾತು

ಕನ್ನಡ ಬ್ಲಾಗಿಗರತ್ತ ಒಮ್ಮೆ ಕಣ್ಣು ಹಾಯಿಸಿದರೆ ತತ್‌ಕ್ಷಣ ಗಮನ ಸೆಳೆಯುವ ಹೆಸರು ಯು.ಆರ್.ಅನಂತಮೂರ್ತಿ. ಜ್ಞಾನಪೀಠ ಪ್ರಶಸ್ತಿ ಪಡೆದ ಒಬ್ಬ ಗಣ್ಯರು ಬ್ಲಾಗ್ ಬರೆಯುತ್ತಿರುವುದು ಇತರ ಬ್ಲಾಗಿಗರಿಗೆ ದೊಡ್ಡ ಸ್ಫೂರ್ತಿ.

ಹೆಸರಾಂತ ಬರಹಗಾರರು, ಉದಯೋನ್ಮುಖ ಬರಹಗಾರರು, ಪ್ರವೃತ್ತಿ ಬರಹಗಾರರು ಮತ್ತಿತರರು ಬ್ಲಾಗುಗಳನ್ನು ಆರಂಭಿಸಿ ಪರ್ಯಾಯ ಸಾಹಿತ್ಯ ಲೋಕ ಸೃಷ್ಟಿಸಬೇಕಿದ್ದರೆ ಅನಂತಮೂರ್ತಿಯಂತಹವರ ಉಪಸ್ಥಿತಿ ಬಹುಮುಖ್ಯ. "ಋಜುವಾತು" (http://rujuvathu.sampada.net) ಎಂಬ ಹೆಸರಿನ ಬ್ಲಾಗನ್ನು ನಡೆಸುತ್ತಿರುವ ಅವರು ಇದರಲ್ಲಿ ಗಂಭೀರ ಮತ್ತು ಚಿಂತನಶೀಲ ಬರಹಗಳನ್ನು ಪ್ರಕಟಿಸುತ್ತಾರೆ.

ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟ್ : ಭಾರತ ವಿರುದ್ಧ ಆಸ್ಟ್ರೇಲಿಯಾ ಲೈವ್ ಸ್ಕೋರ್ ಕಾರ್ಡ್

ಭಾರತ ವಿರುದ್ಧ ಆಸ್ಟ್ರೇಲಿಯಾ ವಿರುದ್ದದ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಕ್ಷಣ ಕ್ಷಣದ ವಿವರಗಳಿಗಾಗಿ ವೆಬ್ ದುನಿಯಾದಿಂದ ಲೈವ್ ಸ್ಕೋರ್ ಕಾರ್ಡ್ ವೀಕ್ಷಿಸಿ.

ಲೈವ್ ಸ್ಕೋರ್ ಕಾರ್ಡ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Friday, September 28, 2007

ಆಹಾರ ಬಡಿಸಿದ ರಾಖಿ ಸಾವಂತ್

10ನೇ ವರ್ಷದಿಂದಲೇ ರಾಖಿ ಸಾವಂತ್ ಟೀನಾ ಅಂಬಾನಿ ವಿವಾಹದಲ್ಲಿ ಆಹಾರವನ್ನು ಬಡಿಸಿದ್ದಳು. ಈಗ ಮುಂಬೈನ ಸಬರ್ಬ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಮಾಲಕಿ. ನನ್ನ ಕಥೆ ಕೇಳುವುದಕ್ಕೆ ಮುಂಚೆ ನಿಮ್ಮ ಕರವಸ್ತ್ರವನ್ನು ಸಿದ್ಧವಾಗಿಡಿ ಎನ್ನುತ್ತಾ ರಾಖಿ ಸಾವಂತ್ ಸಂದರ್ಶನದಲ್ಲಿ ಹೇಳುತ್ತಾಳೆ.

ನಾನು ಬಾಲಕಿಯಾಗಿದ್ದಾಗ ಪುರುಷರು ದುರುಗುಟ್ಟಿಕೊಂಡು ನೋಡಿ ಹೆದರಿಸುತ್ತಿದ್ದರು. ಬಾಲ್ಕನಿಗಳಲ್ಲಿ ನಿಂತುಕೊಳ್ಳುವ ಹಾಗಿಲ್ಲ. ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವಂತಿಲ್ಲ. ನವರಾತ್ರಿ ಸಮಯದಲ್ಲಿ ನೃತ್ಯ ಮಾಡುವಂತಿಲ್ಲ. ಇದರಿಂದ ಬಂಡಾಯ ಪ್ರವೃತ್ತಿ ಬೆಳೆಸಿಕೊಂಡು ಎಲ್ಲ ನಿಯಮಗಳನ್ನು ಮುರಿಯಲು ನಿರ್ಧರಿಸಿದೆ.


Thursday, September 27, 2007

ಸೈಫ್-ಕರೀನಾ ಓಡಾಟದ ಗುಲ್ಲು

ಯಶರಾಜ್ ಫಿಲ್ಮ್ಸ್‌ನ ತಾಷಾನ್ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದೆ. ಅನಿಲ್ ಕಪೂರ್, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಒಟ್ಟಿಗೆ ನಟಿಸಿರುವುದು ಒಂದು ಕಾರಣ. ಅಕ್ಷಯ್ ಮತ್ತು ಅನಿಲ್ ಕುಮಾರ್ ಯಶ್ ರಾಜ್ ಚಿತ್ರದಲ್ಲಿ ಬಹಳ ಸಮಯದ ಬಳಿಕ ನಟಿಸುತ್ತಿದ್ದಾರೆ.



Tuesday, September 25, 2007

ನಾಯಿ ಕಡಿತಕ್ಕೆ ಚರಂಡಿ ಸ್ನಾನ ಮದ್ದು!

ಆಹಾ ! ಜಗತ್ತಿನಲ್ಲಿ ಇನ್ನೂ ಎಂತೆಂತಹ ಪರಿಹಾರಗಳನ್ನು ಮನುಷ್ಯ ಶೋಧಿಸುತ್ತಾನೆ ಎಂದರೆ ಲೆಕ್ಕವಿಲ್ಲ. ಅದ್ಕೆ ಮನುಷ್ಯ ಎನ್ನುವವನಿಗೆ ಬುದ್ಧಿ ಹೆಚ್ಚು ಎಂದು ಹೇಳುವುದು. ಅಕಸ್ಮಾತ್ ಸರಿರಾತ್ರಿಯಲ್ಲಿ ಹೋಗುವಾಗ ನಾಯಿಯೊಂದು ಕಚ್ಚಿತು ಅಂತಿಟ್ಕೊಳ್ಳಿ. ಆಗ ನೀವೇನು ಮಾಡುತ್ತಿರಿ ? ಡಾಕ್ಟರ್ ಹತ್ತಿರ ಹೋಗಿ ಇಂಜಕ್ಷನ್ ಮಾಡಿಸಿಕೊಳ್ಳುತ್ತೀರಿ. ಬಹುಶಃ ಅದು ಹುಚ್ಚು ನಾಯಿ ಆಗಿದ್ದರೆ ಹೊಕ್ಕಳ ಸುತ್ತ ಭರ್ತಿ ಹದಿನಾಲ್ಕು ಇಂಜಕ್ಷನ್ ಮಾಡಿಸ್ಕೋಬೇಕು. ಬಿಡದ ಕರ್ಮ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೆಬೇಕು.

ಇಲ್ಲಿದೆ ಪರಿಹಾರ, ಲಕ್ನೋದಲ್ಲಿ, ಅಲ್ಲಿಯ ಒಂದು ಚರಂಡಿಯಲ್ಲಿ ಸ್ನಾನ ಮಾಡಿದರೆ ಸಾವಿರ ರೂಪಾಯಿಗಳು ಉಳೀತದೆ. ಹೆಚ್ಚಾಗಿ ಹೊಕ್ಕಳ ಇಂಜಕ್ಷನ್ ನರಕದಿಂದ ನೀವು ಬೈಪಾಸ್ ಆಗಬಹುದು. ಲಕ್ನೋದಿಂದ ಫೈಜಾಬಾದ್ ಸೇತುವೆ ಕೆಳಗೆ ಇರುವ ಈ ಹಳ್ಳಕ್ಕೆ ಕುಕ್ರೇಲ್ ನಾಲಾ ಎಂದು ಹೆಸರು. ಅದಕ್ಕೆ ನಾವಿಟ್ಟ ಹೆಸರು ಚರಂಡಿ ಎಂದು. ಇದಕ್ಕಿಂತ ಉತ್ತಮ ಶಬ್ದ ನಮ್ಮಲಿಲ್ಲ. ಇದ್ದರೆ ನೀವೆ ನಾಮಕರಣ ಮಾಡಿಬಿಡಿ.


ಭಾರತಕ್ಕೆ ಚೊಚ್ಚಲ ಟ್ವೆಂಟಿ 20 ಕಿರೀಟ

ಅಕ್ಷರಶಃ ಕದನವೇ ಏರ್ಪಟ್ಟಂತಿದ್ದ ಫೈನಲ್ ಪಂದ್ಯದ ಕೊನೆಯ ಓವರಿನ ಥ್ರಿಲ್ಲರ್‌ನಲ್ಲಿ ಭಾರತ ಮೇಲುಗೈ ಸಾಧಿಸಿ ಚೊಚ್ಚಲ ಐಸಿಸಿ ಟ್ವೆಂಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತಲ್ಲದೆ, ಇತಿಹಾಸ ಸೃಷ್ಟಿಸಿತು.

ಅದ್ಭುತ ಬೌಲಿಂಗ್ ಸಂಘಟಿಸಿದ ಭಾರತೀಯ ಪಾಳಯದ ಬೌಲರುಗಳು ಪಾಕಿಸ್ತಾನೀ ದಾಂಡಿಗರ ಹೆಡೆಮುರಿ ಕಟ್ಟಿದರು. ಮಧ್ಯೆ ಮಧ್ಯೆ ಸಿಕ್ಸರ್ ಹೊಡೆಸಿಕೊಳ್ಳುತ್ತಿದ್ದಾಗಲೆಲ್ಲಾ ಕೆರಳುತ್ತಿದ್ದ ಬೌಲರುಗಳು ಅದೇ ವೇಗದಲ್ಲಿ ವಿಕೆಟ್‌ಗಳನ್ನೂ ಪಡೆಯುತ್ತಿದ್ದರು. ಅರ್ಹವಾಗಿಯೇ ಇರ್ಫಾನ್ ಪಠಾಣ್ (4 ಓವರ್ 16 ರನ್ 3 ವಿಕೆಟ್ ) ಪಂದ್ಯಶ್ರೇಷ್ಠರಾಗಿ ಪುರಸ್ಕೃತರಾದರು.

ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Saturday, September 22, 2007

ವೆಬ್‌ದುನಿಯಾ ವಾರದ ಬ್ಲಾಗ್: ಅವಧಿ

ಬೆಳೆಯುತ್ತಿರುವ ಕನ್ನಡ ಬ್ಲಾಗ್ ಲೋಕ ಅದ್ಭುತವಾಗಿ ಬೆಳಗುತ್ತಿದೆ. ಕೆಲವು ಬ್ಲಾಗ್‌ಗಳು ಆಂತರ್ಯದ ದನಿಯಾಗಿದ್ದರೆ, ಇನ್ನು ಕೆಲವು ಭಾವನೆಗಳ ಬಿತ್ತರ. ಮತ್ತೆ ಕೆಲವರಿಗೆ ಅವರದ್ದೇ ಕತೆ, ಕಾವ್ಯ, ಲಹರಿಗಳ ಸಂಕಲನ. ಈ ಮಧ್ಯೆ ಒಂದು ನಿರ್ದಿಷ್ಟ ಉದ್ದೇಶದಿಂದ ಹೋರಾಟದ, ಸುಧಾರಣೆಯ ಕೆಚ್ಚಿನಿಂದ(ಕಿಚ್ಚಿನಿಂದ) ಬ್ಲಾಗಿಸುವವರೂ ಇದ್ದಾರೆ. ಇವುಗಳಲ್ಲಿ ಅತ್ಯುತ್ತಮ ಬ್ಲಾಗ್ ಅಂತ ಆರಿಸೋದು ಕಷ್ಟದ ಸಂಗತಿ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ, ಓದಲೂ ಚೆನ್ನ.

ಈ ಬ್ಲಾಗುಗಳನ್ನು ಗುರುತಿಸಿ ಪರಿಚಯಿಸುವ ಮತ್ತು ವಾರಕ್ಕೊಂದು ಬ್ಲಾಗಿನ ಮೇಲೆ ಬೆಳಕು ಚೆಲ್ಲುವ ಈ ಅಭಿಯಾನವನ್ನು ನಾವಿಂದು ಆರಂಭಿಸುತ್ತಿದ್ದೇವೆ. ಈ ಬಾರಿ ನಮ್ಮ ಆಯ್ಕೆ "ಅವಧಿ" ಬ್ಲಾಗ್.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯುವರಾಜ್‌ಗೆ ನಾಯಕತ್ವ ದೊರೆಯದ ಕೊರಗು: ತಂದೆ ಶಂಕೆ

ಡರ್ಬನ್‌ನಲ್ಲಿ ಮೈದಾನದಲ್ಲಿ ರನ್ನುಗಳ ಸುರಿಮಳೆ ಸುರಿಸಿ ಹೀರೋ ಪಟ್ಟ ಅಲಂಕರಿಸತೊಡಗಿರುವ ಯುವರಾಜ್ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ದೊರೆತಿಲ್ಲ ಎಂಬ ಕೊರಗು ಕಾಡುತ್ತಿದೆಯೇ?

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಪ್ರಕಾರ, ಹೌದು. ಈ ವಿಷಯದಲ್ಲಿ ಮಗ ತಮ್ಮ ಬಳಿ ಒಮ್ಮೆಯೂ ವಿಷಯವೆತ್ತಿಲ್ಲ, ಆದರೆ ನಾಯಕತ್ವ ವಿಷಯದಲ್ಲಿ ತಮ್ಮ ಮಗನನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ ಅವರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Friday, September 21, 2007

ಅಕ್ಷನ್ ಚಿತ್ರಕ್ಕೆ ತನುಶ್ರೀ ರೆಡಿ

ಗ್ಲಾಮರಸ್ ಪಾತ್ರಗಳಿಗೆ ಹೆಸರಾದ ತನುಶ್ರೀ ದತ್ತಾ ಈಗ ಆಕ್ಷನ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಕೊಟ್ಟಿಲ್ಲ ಮತ್ತು ಹಾಡಿ ಅಬ್ರಾರ್ ನಿರ್ದೇಶಿಸುತ್ತಿದ್ದಾರೆ.

"ಇದು ಮುಖ್ಯವಾಹಿನಿ ಸಿನೆಮಾದ ಭಾಗವಲ್ಲ.ಮಕ್ಕಳನ್ನು ಕೇಂದ್ರವಸ್ತುವಾಗಿಸಿಕೊಂಡು ನಿರ್ಮಿಸಲಾಗಿದೆ. ವಿಶೇಷ ಪರಿಣಾಮಗಳು ಮತ್ತು ಫ್ಯಾಂಟಸಿಗಳಿಂದ ಕೂಡಿದ ಮಕ್ಕಳ ಚಿತ್ರ" ಎಂದು ತನುಶ್ರೀ ವಿವರಿಸುತ್ತಾಳೆ. ಸದಾ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿ ತನುಶ್ರೀಗೆ ಬೋರಾಗಿದೆಯಂತೆ.

"ಶಾಣ್ಯಾರ ಕೂಡಿ ಶ್ಯಾವಿಗಿಗಿ ಉಪ್ಪ ಹಾಕಿದ್ದರಂತ"..

ಧರ್ಮಾಂಧತೆ ಮತ್ತು ಭಾಷಾಂಧತೆ ಮತ್ತು ಬುದ್ದಿಜೀವಿಗಳನ್ನು ಮತ್ತು ಅಂತಹ ಗುಣ ಸಂಪನ್ನರನ್ನು ಒಂದು ಕಡೆ ಸೇರಿಸಿದರೆ ಏನಾಗುತ್ತದೆ ? ಎನ್ನುವುದಕ್ಕೆ ರಾಮ ಸೇತು ವಿವಾದ ಚೆಂದದ ಉದಾಹರಣೆಯಾಗಬಲ್ಲದು. ತಮಿಳುನಾಡಿನಲ್ಲಿ ಕರುಣಾನಿಧಿ, ರಾಮ ಅನ್ನೊ ವ್ಯಕ್ತಿ ಶಾಲೆ ಕಲಿತಿಲ್ಲ ಅವನಿಗೆ ಅಕ್ಷರ ಜ್ಞಾನ ಇಲ್ಲ ಎಂದು ಹೇಳಿದರೆ ಅಲ್ಲಿ ದೂರದ ಬೆಂಗಳೂರಿನಲ್ಲಿ ರಾಮ ಭಕ್ತರು ಏನೂ ಗೊತ್ತಿರದ ಸೆಲ್ವಿ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡ್ತಾರೆ.


ಇದೇ ಅವಕಾಶ ಸಿಕ್ತು ಅಂತ ಕೆಲವರಿಂದ , ಏನೂ ಅರಿಯದ ತನ್ನ ಪಾಡಿಗೆ ಬುರ್ರ ಎಂದು ಹೋಗುವ-ಬರುವ ತಮಿಳು ನಾಡಿನ ಬಸ್ಸು (ಬಂಡಿ) ಬೆಂಕಿಗೆ ಆಹುತಿಯಾಗುತ್ತದೆ.

ರಾಮನ ವಿಚಾರದಿಂದಲೇ ಪ್ರಾರಂಭಿಸೋಣ.. ತನಗೆ ದೇವರು ಅನ್ನೊ ಕಲ್ಪನೆ ಬೇಡ ಎಂದ ಮಾತ್ರಕ್ಕೆ ಇತರರಿಗೂ ಬೇಡವೆ ? ಓಟು ಬ್ಯಾಂಕ್ ಲೆಕ್ಕಾಚಾರ ಬದಿಗಿಟ್ಟರೂ ಕರುಣಾನಿಧಿ ಹೇಳಿಕೆ ತಪ್ಪು. ದೇವರು ಬೇಡ. ಅವನ ಏಜೆಂಟರಾದ ಬ್ರಾಹ್ಮಣರೂ ಬೇಡ ಎಂದು ಹೇಳಿದ್ದ ಪೆರಿಯಾರ್ ರಾಮಸ್ವಾಮಿ ಗುಂಪಿಗೆ ಸೇರಿದ ಕರುಣಾನಿಧಿ, ತಾವೊಬ್ಬರು ಸೇರಿದರೆ ಜಗತ್ತೇ ಸೇರಿದೆ ಎಂಬಂತೆ ಯಾಕೆ ಮಾತನಾಡಬೇಕು.
ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ

Thursday, September 20, 2007

ಮತ್ತೆ ಝೇಂಕರಿಸಿದ ರಾಣಿ ಮುಖರ್ಜಿ

ಬಾಲಿವುಡ್‌ನ ರಾಣಿ ಮುಖರ್ಜಿ ಮತ್ತೆ ಝೇಂಕರಿಸುತ್ತಿದ್ದಾಳೆ. ಸಂಜಯ್ ಲಿಲಾ ಭನ್ಸಾಲಿಯವರ ಸವಾರಿಯಾದಲ್ಲಿ ಉನ್ಮಾದತೆ ಸೃಷ್ಟಿಗೆ ಅವರು ಹೊರಟಿದ್ದಾರೆ.

ರಾಣಿಯ ಎರಡು ಮೆಗಾ ಪ್ರಾಜೆಕ್ಟ್‌ಗಳಲ್ಲಿ ಇದು ಮೊದಲನೆಯದು. ಎರಡನೆಯದು ಲಗಾ ಚುನಾರಿ ಮೇನ್ ಡಾಗ್. ಸವಾರಿಯಾದಲ್ಲಿ ಸಂಜಯ್ ಲೀಲಾ ಭನ್ಸಾಲಿ ಕನಸಿನ ಹುಡುಗ ರಣಬೀರ್ ಕಪೂರ್ ಸಲ್ಮಾನ್ ಬಾಯಿ ಜತೆ ಪಾತ್ರ ಹಂಚಿಕೊಂಡಿದ್ದಾರೆ.

6 ಬಾಲ್, 6 ಸಿಕ್ಸ್, 16 ಬಾಲ್, 58 ರನ್!

ಒಂದು ಓವರಿನಲ್ಲಿ ಐದು ಸಿಕ್ಸರ್ ಹೊಡೆಸಿಕೊಂಡ ಸೇಡನ್ನು ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ತೀರಿಸಿಕೊಂಡಿದ್ದಾರೆ.

ಅದೇ ಇಂಗ್ಲೆಂಡ್ ವಿರುದ್ಧ ಬುಧವಾರ ನಡೆದ ಟ್ವೆಂಟಿ ಟ್ವೆಂಟಿ ಪಂದ್ಯದ 19ನೇ ಓವರಿನ ಎಲ್ಲಾ ಚೆಂಡುಗಳನ್ನೂ ಬೌಂಡರಿ ಗೆರೆ ದಾಟಿಯೇ ಬೀಳುವಂತೆ ಬೀಸಿದ ಯುವರಾಜ್ ಸಿಂಗ್, ವಿಶ್ವ ದಾಖಲೆ ಸರಿಗಟ್ಟಿದರಲ್ಲದೆ, ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸ್ಫೋಟಿಸುವ ಮೂಲಕ, ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಶತಕಾರ್ಧ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

Tuesday, September 18, 2007

ತಿರುಮಲದಲ್ಲಿ ಗರುಡ ವಾಹನೋತ್ಸವ ಸಿದ್ಧತೆ

ತಿರುಪತಿ ಬ್ರಹ್ಮೋತ್ಸವ ವೈಭವವು ಅದ್ದೂರಿಯಿಂದ ನಡೆಯುತ್ತಿದೆ. ನಾಳೆ ವಿಶ್ವ ವಿಖ್ಯಾತ ಗರುಡ ವಾಹನೋತ್ಸವ ನಡೆಯಲಿದೆ. ವೆಬ್‌ದುನಿಯಾದಲ್ಲಿ ಅದರ ವೀಡಿಯೋ ಹಾಗೂ ವಿಶೇಷ, ಆಕರ್ಷಕ ಫೋಟೋ ಗ್ಯಾಲರಿ ಲಭ್ಯವಿದೆ.

ಜೀವಕ್ಕೆ ಎರವಾದ ಕುರುಡು ನಂಬಿಕೆ.

ನಂಬಿ ಬಂದವರಲ್ಲಿ ಅನಾಮತ್ತು 11 ಜನರನ್ನು ಸಾವಿನ ದವಡೆಗೆ ನೂಕಿ ನಿರುಮ್ಮಳವಾಗಿ ಕುಳಿತ ಸರೌತಾ ಬಾಬಾನ ಕಥೆಯಿದು. (ಸರೌತಾ ಅಂದರೆ ಕಾಯಿ ಕತ್ತರಿಸಲು ಉಪಯೋಗಿಸುವ ಒಂದು ಸಾಧನ) ಮಧ್ಯಪ್ರದೇಶದ ಜಬಲ್ಪುರ್ ಸಮೀಪದಲ್ಲಿದ್ದ ಈತ ಜನರಿಗೆ ಹೇಳಿದ್ದು ಏನು ಗೊತ್ತೇ ?

ಸರೌತಾದಿಂದ ನಿಮ್ಮ ಕಣ್ಣುಗಳ ರೋಗ ಕಡಿಮೆ ಮಾಡುತ್ತೇನೆ, ಏಡ್ಸ್, ಕ್ಯಾನ್ಸರ್‌ನಂತಹಾ ರೋಗಗಳನ್ನೂ ಇನ್ನಿಲ್ಲದಂತೆ ಮಾಡುತ್ತೇನೆ ಎಂದು. ಜನಾ ಎಂತವರು ನೋಡಿ, ಅಂವ ಹೇಳಿದ ಇವರು ಕೇಳಿದರು.

Monday, September 17, 2007

ಸೆಕ್ಸಿ ಪಾತ್ರಗಳನ್ನೇ ನೀಡುತ್ತಾರೇಕೆ?: ಉದಿತಾ ಪ್ರಶ್ನೆ

ಚಿತ್ರನಿರ್ಮಾಪಕರು ನನಗೆ ಸೆಕ್ಸಿ ದೃಶ್ಯಗಳಿಲ್ಲದ ಪಾತ್ರಗಳನ್ನು ಏಕೆ ಕೊಡುತ್ತಿಲ್ಲವೆಂಬುದೇ ಅರ್ಥವಾಗುತ್ತಿಲ್ಲ ಎಂದು ಉದಿತಾ ಗೋಸ್ವಾಮಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಎಲ್ಲೇ ಹೋಗಲಿ, ಪಾಪ್, ಜೆಹೆರ್ ಮತ್ತು ಅಕ್ಸರ್ ಚಿತ್ರದ ಹುಡುಗಿಯೆಂಬ ಭಾವನೆಯಿಂದ ನನ್ನನ್ನು ನೋಡುತ್ತಾರೆ ಎಂದಾಕೆ ಮನಬಿಚ್ಚಿ ನುಡಿದಿದ್ದಾರೆ.

ನಾನು ಅಂತಹ ಪಾತ್ರಗಳನ್ನು ಬಿಟ್ಟು ಬೇರೆ ರೀತಿಯಲ್ಲೂ ನಟಿಸಲು ಸಮರ್ಥಳು ಎಂದು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಉದಿತ್ ಪ್ರಶ್ನಿಸುತ್ತಾಳೆ.

ಲಕ್ಷ ಮೋದಕ ಸೇವ್ಯ ಖಜ್ರಾನಾ ಗಣೇಶ

ನಾವೆಲ್ಲರೂ ಗಣೇಶೋತ್ಸವವನ್ನು ಆಚರಿಸಿದ್ದೇವೆ. ಇಡೀ ದೇಶವೇ ಗಣಪನ ಜನ್ಮದಿನದ ಆಚರಣೆಯ ಸಡಗರದಲ್ಲಿದೆ. ಗಣೇಶೋತ್ಸವದ ಈ ಪರ್ವಕಾಲದಲ್ಲಿ ಇಂದೋರಿನ ಅತ್ಯಂತ ಪುರಾತನವಾದ ಮತ್ತು ಅಷ್ಟೇ ಪರಮ ಪವಿತ್ರ ಕ್ಷೇತ್ರ ಖಜ್ರಾನಾ ಮಂದಿರವನ್ನು ಪರಿಚಯಿಸಲಿದ್ದೇವೆ. ಈ ದೇವಸ್ಥಾನವನ್ನು ಕ್ರಿ.ಶ. 1735ರಲ್ಲಿ ಕಟ್ಟಲಾಗಿತ್ತು. ಇಲ್ಲಿ ಲಕ್ಷ ಮೋದಕ ಸೇವೆ ವಿಶಿಷ್ಟವಾದುದು.

Friday, September 14, 2007

ಪ್ರಥಮ ಪೂಜಿತನಿಗೆ ವೆಬ್‌ದುನಿಯಾ ನಮನ

ಎಲ್ಲೆಡೆ ಶ್ರೀ ಗಣೇಶೋತ್ಸವ ಸಡಗರ, ಸಂಭ್ರಮ. ಆದಿ ಪೂಜಿತ, ಅಮರ ವಂದ್ಯನ ಉತ್ಸವದ ಕುರಿತು ವೆಬ್ ದುನಿಯಾ ಕನ್ನಡ ತಾಣವು ಹೊರತಂದಿರುವ ವಿಶೇಷ ಪುಟ, ಫೋಟೋ ಗ್ಯಾಲರಿಗಳು ಇಲ್ಲಿ ಕ್ಲಿಕ್ ಮಾಡಿದರೆ ಲಭ್ಯ.

ವೆಬ್‌ದುನಿಯಾದಲ್ಲಿ ತಿರುಪತಿ ಬ್ರಹ್ಮೋತ್ಸವ

ಶ್ರೀ ಶ್ರೀನಿವಾಸನ ಸನ್ನಿಧಿಯಿರುವ ತಿರುಪತಿಯಲ್ಲಿ ನಡೆಯುವ ಅತ್ಯಂತ ವೈಭವೋಪೇತ ಉತ್ಸವ ಶ್ರೀವಾರಿ ಬ್ರಹ್ಮೋತ್ಸವ. ಈ ಉತ್ಸವವು 9 ದಿನಗಳ ಪರ್ಯಂತ ಮುಂದುವರಿಯುತ್ತದೆ. ಈ ಬಾರಿ ಬ್ರಹ್ಮೋತ್ಸವವು ಸೆ.15ರಿಂದ 23, 2007ವರೆಗೆ ನಡೆಯಲಿದೆ.

ಬ್ರಹ್ಮೋತ್ಸವ ಕುರಿತು ಆಕರ್ಷಕ ವಿನ್ಯಾಸದ ವಿಶೇಷ ಪುಟ ಇಲ್ಲಿ ಕ್ಲಿಕ್ ಮಾಡಿದರೆ ಲಭ್ಯ. ವೆಬ್ ದುನಿಯಾ ಓದುಗರಿಗೆ ಬ್ರಹ್ಮೋತ್ಸವವನ್ನು ಕಣ್ಣಾರೆ ನೋಡುವ ಅವಕಾಶವೂ ಇಲ್ಲಿದೆ. ವಿಶೇಷ ವೀಡಿಯೋ, ಫೋಟೋ ಗ್ಯಾಲರಿಗಳಿವೆ.

Wednesday, September 12, 2007

ಟ್ವೆಂಟಿ20: ಗೇಲ್ಸ್ 57 ಎಸೆತ, 117 ರನ್ (10 ಸಿಕ್ಸ್)

ದಾಖಲೆಯ ಸವಾಲು ಬೆನ್ನತ್ತಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡಿಸ್ ವಿರುದ್ಧ ನಡೆದ,ಟ್ವೆಂಟಿ-20 ವಿಶ್ವಕ‌ಪ್‌ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಪಂದ್ಯವನ್ನು ಎಂಟು ವಿಕೆಟ್‌ಗಳ ಅಂತರದಿಂದ ಗೆದ್ದು ದಾಖಲೆಯ ಜಯಸಾಧಿಸಿದೆ.

ಇಪ್ಪತ್ತು ಓವರುಗಳ ಆಟದಲ್ಲಿ ವೆಸ್ಟ್ ಇಂಡಿಸ್ ತಂಡ ನೀಡಿದ 206 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಹರ್ಷಲ್ ಗಿಬ್ಸ್ ಅವರ ಮಿಂಚಿನ 90 ರನ್‌‌‌ಗಳ ನೇರವಿನಿಂದ 4 ಎಸೆತಗಳು ಬಾಕಿ ಇರುವಂತಯೇ ಗೆಲುವಿನ ಕೇಕೆ ಹಾಕಿತು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ವೈಜಯಂತಿಮಾಲಾ-ರಾಜ್ ಕಪೂರ್ ಪ್ರಣಯದ ಗುಲ್ಲು

ಹಿಂದಿ ಚಿತ್ರರಂಗದ ಹಿರಿಯ ನಟ ರಾಜಕಪೂರ್‌ ಜತೆ ತಮ್ಮ ಪ್ರಣಯದ ಗುಲ್ಲು ಹಬ್ಬಿದ್ದರಿಂದ ತೀವ್ರ ಬೇಸರವಾಯಿತೆಂದು ಹಿರಿಯ ನಟಿ ವೈಜಯಂತಿ ಮಾಲಾ ಹೇಳಿದ್ದಾರೆ.

ಶೋಮ್ಯಾನ್ ರಾಜಕಪೂರ್ ತರುವಾಯ ಸಿಕ್ಕಿದ ಪ್ರಚಾರದಿಂದ ಖುಷಿಪಟ್ಟರು. ಆದರೆ ಮಾಧ್ಯಮ ನನ್ನ ಅಭಿಪ್ರಾಯ ಕೇಳಲೇ ಇಲ್ಲ ಎಂದು ಅವರು ಗತಜೀವನದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Monday, September 10, 2007

ಕಲಿಯುಗ ವರದ ಶಬರಿಮಲೆ ಅಯ್ಯಪ್ಪ

ಕಲಿಯುಗದಲ್ಲಿ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರವಾಗಿರುವ ಶ್ರೀ ಸ್ವಾಮಿ ಅಯ್ಯಪ್ಪನ ನೆಲೆವೀಡು ಕೇರಳದ ಶಬರಿಮಲೆ. ಇದು ವಿಶ್ವದ ಅತ್ಯಂತ ಹೆಚ್ಚು ಭಕ್ತ ಸಮುದಾಯವು ಸಂದರ್ಶಿಸುವ ಧಾರ್ಮಿಕ ತಾಣಗಳಲ್ಲೊಂದು. ಮೆಕ್ಕಾದ ಹಜ್ ಬಳಿಕ ವಿಶ್ವದ ಎರಡನೇ ಅತಿದೊಡ್ಡ ವಾರ್ಷಿಕ ಯಾತ್ರಾ ಕೇಂದ್ರ ಶಬರಿಮಲೆ ಎಂದೂ ಹೇಳಲಾಗುತ್ತಿದೆ. ಕಳೆದ ವರ್ಷದ ನವೆಂಬರ್‌ನಿಂದ ಜನವರಿವರೆಗೆ ಅಂದಾಜು ಐದು ಕೋಟಿ ಭಕ್ತರು ಈ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ.

ಚಕ್ ದಿಯಾ ಇಂಡಿಯಾ

ಕೊರಿಯಾವನ್ನು ಮಣಿಸಿದ ಭಾರತ

ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೆಡಿಯಂನಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ತನ್ನ ಚಾಂಪಿಯನ್‌ಷಿಪ್ ಪಟ್ಟವನ್ನು ಉಳಿಸಿಕೊಂಡದ್ದು ಮಹತ್ವ ಅಲ್ಲ. ವಾಸ್ತವಿಕವಾಗಿ ಟೂರ್ನಿ ಉದ್ದಕ್ಕೂ ಆಡಿದ ರೀತಿ ಇದೆಯಲ್ಲ ಅದು ಮೆಚ್ಚಬೇಕಾದ್ದು,
ಅಪ್ಪಿತಪ್ಪಿಯೂ ಸೋಲಿನತ್ತ ಸುಳಿಯದ ಚಕ್‌ ದೇ ಇಂಡಿಯಾ, ಭರ್ತಿ 57 ಗೋಲುಗಳನ್ನು ಮಾಡಿದ್ದು ಅಲ್ಲದೇ ಎದುರಾಳಿಗೆ ಬರಿ ಐದು ಗೋಲು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು, ನೋಡಿದರೆ, ಭಾರತದಲ್ಲಿ ಹಾಕಿಯ ಪುನರುತ್ಧಾನವಾಗಿದೆ ಯುದ್ದ ಕೂಗು ಚಕ್ ದೇ ಇಂಡಿಯಾ ಮುಗಿಲು ಮುಟ್ಟಿದೆ. ಇನ್ನು ಎರಡು ತಿಂಗಳು ಪಕ್ಕದ ಮನೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಅಲ್ಲೂ ನಮ್ಮವರು ಎಲ್ಲರಿಗೆ ಚಕ್ ನೀಡಿ ಬರಲಿ...

ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.

Saturday, September 8, 2007

ಕ್ರಿಕೆಟ್ ಸ್ಕೋರ್ ಕನ್ನಡದಲ್ಲಿ ಲೈವ್

ಭಾರತೀಯ ದಾಂಡಿಗರು ಇಂಗ್ಲೆಂಡ್ ವಿರುದ್ಧ ಸರಣಿ ನಿರ್ಣಾಯಕವಾಗಿರುವ ಏಳನೇ ತಥಾ ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಎದ್ದೂ ಬಿದ್ದು ಕಷ್ಟಪಟ್ಟು 187 ರನ್ ಸಂಪಾದಿಸಿದ್ದರೆ, ನಮ್ಮ ಆರ್.ಪಿ.ಸಿಂಗ್, ಇಂಗ್ಲೆಂಡಿನ ಆರಂಭಿಕ ದಾಂಡಿಗರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿದ್ದಾರೆ.

ಬ್ಲಾಗ್ ಲೋಕದೊಳಗೆ ವೆಬ್‌ದುನಿಯಾ ದೃಷ್ಟಿ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕ - ಬ್ಲಾಗ್. ಇಲ್ಲಿ ನಿಮಗೇನನಿಸುತ್ತದೋ... ಗೀಚಿ ಬಿಡಬಹುದು... ಅಲ್ಲಲ್ಲ... ಕುಟ್ಟಬಹುದು! "ವೆಬ್‌ದುನಿಯಾ ಕನ್ನಡ"ವು ವಾರಕ್ಕೊಂದು ಬ್ಲಾಗನ್ನು ವಿಶ್ಲೇಷಿಸಿ, 'ವಾರದ ಬ್ಲಾಗ್' ಎಂಬ ಅಂಕಣವನ್ನು ಆರಂಭಿಸುತ್ತಿದೆ.

ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Friday, September 7, 2007

ಬ್ಲಾಗ್ ಲೋಕದೊಳಗೆ ವೆಬ್‌ದುನಿಯಾ ದೃಷ್ಟಿ

ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು ಧನಾತ್ಮಕ ಪರಿಣಾಮಗಳಲ್ಲೊಂದು ಕೂಡ ಹೌದು.

ಸರಕಾರದ ಧೋರಣೆ ಬಗ್ಗೆ, ನಿಮ್ಮೂರಿನ ಸಮಸ್ಯೆಗಳ ಬಗ್ಗೆ... ನಿಮಗೇನನಿಸುತ್ತದೋ... ಬರೆದು ಬಿಡಿ... ಅಲ್ಲಲ್ಲ... (ಬ್ಲಾಗಿಗರ ಭಾಷೆಯಲ್ಲೇ ಹೇಳುವುದಾದರೆ) ಕೀಬೋರ್ಡ್ ಕುಟ್ಟಿ ಬಿಡಿ!

ವೆಬ್‌ದುನಿಯಾ ಕನ್ನಡ"ವು ವಾರಕ್ಕೊಂದು ಬ್ಲಾಗನ್ನು ವಿಶ್ಲೇಷಿಸಿ, 'ವಾರದ ಬ್ಲಾಗ್' ಎಂಬ ಅಂಕಣವನ್ನು ಆರಂಭಿಸುತ್ತಿದೆ.
ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗುರುವೇ ಇದು ಕನಸು.. ಬೇಡಾ

ಗುರುವೇ.... ಹೂಂ ಕೇಳಸ್ತಾ .. ನಮ್ಮ ಅಪ್ರತ್ಯಕ್ಷ ಗುರುಗಳು ಆದಂತಹಾ ಸಂದೀಪ್ ಮಿಶ್ರಾ. ಭಾರತೀಯರಿಗಾಗಿ, ಭಾರತೀಯ ಹಾಕಿಗಾಗಿ ದೊಡ್ಡ ಕನಸು ಕಟ್ಟಿಬಿಟ್ಟಿದ್ದಾರೆ.

ಎಂತಾ ಕನಸು ಅದು. ಎರಡೇ ವರ್ಷದಲ್ಲಿ ನಮ್ಮ ಹುಡುಗರು ಪ್ರಬ್ಜೋತು. ದಿಲೀಪು. ತುಷಾರ್, ಇಗ್ನೇಸ್ ಅವರ್ಮುಂದೆ ಸಚೀನೂ, ರಾಹುಲ್ ಯಾವ ಲೆಕ್ಕ ಇಲ್ಲ. ಅಯ್ಯೋ ಕರ್ಮ.. ಯಾರದು ಸಂದೀಪ್ ಮಿಶ್ರಾ ಅಂತ ಕೇಳ್ತಿಯಲ್ಲೋ...

ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ..

Thursday, September 6, 2007

ಲೇಡಿ ಡಾನ್ - ಶಿಲ್ಪಾ

ಫರಾನ್ ಅಕ್ತರ್ ಅವರ ಚಿತ್ರದ ಡಾನ್ ಪಾತ್ರದಲ್ಲಿ ಶಾರೂಕ್ ಖಾನ್ ಅಭಿನಯ ನಿರೀಕ್ಷಿಸಿದ ಮಟ್ಟದಲ್ಲಿಲ್ಲ ಎಂದು ನೀವು ಭಾವಿಸಿದ್ದರೆ, ನಿಮಗಾಗಿ ಒಂದು ಸುದ್ದಿ ಕಾದಿದೆ. ಡಾನ್ ಪರಂಪರೆ ಮುಂದುವರಿಸುವ ಜವಾಬ್ದಾರಿಯನ್ನು ತುಳುನಾಡಿನ ಯುವತಿ ಶಿಲ್ಪಾ ಶೆಟ್ಟಿ ಹೊತ್ತಿದ್ದಾಳೆ.

"ಶಿಲ್ಪಾ ದಿ ಬಿಗ್ ಡಾನ್‌"ನಲ್ಲಿ ಅವಳದ್ದು ಲೇಡಿ ಡಾನ್ ಪಾತ್ರ. ಶಿಲ್ಪಾಗೆ ಹಾಲಿವುಡ್ ಚಿತ್ರ "ಪಿಂಕ್ ಪ್ಯಾಂಥರ್ 2"ನಲ್ಲಿ ನಟಿಸುವ ಆಫರ್ ಇತ್ತು. ಆದರೆ ಶಿಲ್ಪಾ ಅದನ್ನು ನಿರಾಕರಿಸಿದಳೆಂಬ ಗುಸು ಗುಸು ಬಾಲಿವುಡ್‍‌ನಲ್ಲಿ ಹರಡಿದೆ.

ಸಚಿನ್, ಉತ್ತಪ್ಪ ಅಬ್ಬರ: ಸರಣಿ ಸಮಬಲ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಮಿಂಚಿನ 94 ರನ್‌ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ನಡೆದ ಸರಣಿಯ ಆರನೆ ಪಂದ್ಯವನ್ನು ಎರಡು ವಿಕೆಟ್‌ಗಳ ಅಂತರದಿಂದ ಗೆದ್ದ ಟೀಮ್ ಇಂಡಿಯಾ. ಕಂಡರಿಯದ ರೀತಿಯಲ್ಲಿ ಸರಣಿಯನ್ನು 3-3 ಅಂತರಕ್ಕೆ ತಂದು ನಿಲ್ಲಿಸಿದೆ. ಲಾರ್ಡ್ಸ್‌ನಲ್ಲಿ ಶನಿವಾರ ನಡೆಯಲಿರುವ ಅಂತಿಮ ಪಂದ್ಯ ಉಭಯ ತಂಡಗಳ ಪಾಲಿಗೆ ಸತ್ವ ಪರೀಕ್ಷೆಯಾಗಲಿದೆ.

ಎದುರಾಳಿ ಪಾಲ್ ಕಾಲಿಂಗ್‌ವುಡ್ ನೇತೃತ್ವದ ಬ್ರಿಟಿಷ್ ಪಡೆ ನೀಡಿದ ಆಸಾಧ್ಯದ 316 ರನ್‌ಗಳ ಸವಾಲನ್ನು ಬೆನ್ನತ್ತಿದ ಭಾರತ, ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಕೇಕೆ ಹಾಕಿತು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Wednesday, September 5, 2007

ಕನ್ನಡದಲ್ಲಿ ಲೈವ್ ಸ್ಕೋರ್ ಕಾರ್ಡ್


ಶಿಕ್ಷಕರ ದಿನಾಚರಣೆ ವಿಶೇಷ: ದಾರಿ ತೋರುವ ಗುರು

ಗುರು ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು ಎಂದರೆ ಇದನ್ನು ಕೇಳಿದ ತಕ್ಷಣವೇ ಶಿಷ್ಯರ ತಲೆ ಗೌರವದಿಂದ ಸ್ವಯಂ ಆಗಿ ಬಾಗುತ್ತದೆ. ಗುರುವು ದೂರ ಮಾಡಿದರೂ ತನ್ನ ಒಳಮನಸ್ಸು ಸ್ವೀಕರಿಸಿದ್ದವರನ್ನೇ ಗುರುವೆಂದು ಪರಿಭಾವಿಸಿಕೊಂಡು, ಏಕಾಗ್ರತೆಯಿಂದ ಬಿಲ್ವಿದ್ಯೆ ಸಾಧಿಸಿ, ಗುರುದಕ್ಷಿಣೆಯಾಗಿ ಕೊಂಬೆರಳು ಕತ್ತರಿಸಿದ ಗುರುವನ್ನು ನಮ್ಮ ಇತಿಹಾಸ ಕಂಡಿದೆ. ಎಲ್ಲೋ ದಟ್ಟ ಹಳ್ಳಿಯೊಂದರಲ್ಲಿ, ಮೂಲಭೂತ ಸೌಕರ್ಯವೂ ಇಲ್ಲದ ಶಾಲೆಯಲ್ಲಿ ಎಲ್ಲಾ ನೋವು ನುಂಗಿಕೊಂಡು, ತನ್ನನ್ನೇ ನೆಚ್ಚಿಕೊಂಡು ಬಂದ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆದು, ಅವರ ಭವಿಷ್ಯ ಉಜ್ವಲವಾಗಿಸುವಲ್ಲೇ ಸಂತೋಷ ಕಾಣುವ ಶಿಕ್ಷಕರ ಬಗ್ಗೆಯೂ ಆಗೀಗ್ಗೆ ಕೇಳುತ್ತೇವೆ.

ಮಗುವಿನ ಮನಸ್ಸು ಹಸಿ ಮಣ್ಣಿನಂತೆ. ಅದನ್ನು ಎರಡೂ ಕೈಗಳಿಂದ ಆದರದಿಂದ ತಟ್ಟಿ, ತಟ್ಟಿ ಸುಂದರವಾದ, ಕಲಾತ್ಮಕವಾದ ವಿಗ್ರಹ ರೂಪಿಸುವುದು ಗುರುವಿನ ಗುರಿ. ಗುರುವಿಲ್ಲದ ಗುರಿಯು ಕೂಡ ಸಾಧಿಸಲಸದಳ. ಅದಕ್ಕೇ ಹೇಳುವುದು ವಿದ್ಯೆಯು ದುಡ್ಡುಕೊಟ್ಟು ಖರೀದಿಸಬಲ್ಲ ಸೊತ್ತಲ್ಲ. ಅಥವಾ ವಿದ್ಯೆ ಎಂಬುದು ಮಾರಾಟದ ಸೊತ್ತೂ ಅಲ್ಲ. ವಿದ್ಯೆಯನ್ನಂತೂ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ.

ಪೂರ್ಣ ಲೇಖನವನ್ನು ಇಲ್ಲಿ ಓದಿ.

Tuesday, September 4, 2007

ಸಾನಿಯಾ ಎಂಟರ ಘಟ್ಟಕ್ಕೆ, ಪೇಸ್ ಸೆ.ಫೈನಲ್‌ಗೆ

ಮಾಜಿ ಚಾಂಪಿಯನ್ನರಾದ ಲೀಸಾ ರೇಮಂಡ್ ಮತ್ತು ಸಮಂತಾ ಸ್ಟಾಸರ್ ಅವರಿಗೆ ಆಘಾತ ನೀಡಿದ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮಾಟೆಕ್ ಅವರು, ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲಿಗೆ ಏರಿದ್ದಾರೆ.

ಆದರೆ, ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮತ್ತು ಮಹೇಶ್ ಭೂಪತಿ ಜೋಡಿಯು ಬೆಲಾರುಸ್ ಜೋಡಿಯೆದುರು ಪರಾಭವ ಅನುಭವಿಸಿ ಕೂಟದಿಂದ ಹೊರಬಿದ್ದಿದೆ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger