ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Saturday, November 3, 2007

ಬಿಜೆಪಿ-ಜೆಡಿಎಸ್ ಶಾಸಕರಿಂದ ಧರಣಿ ಆರಂಭ

ಸರಕಾರ ರಚನೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ಧೋರಣೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳ ಶಾಸಕರು ನಗರದಲ್ಲಿಂದು ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದರು.

ಬಿಜೆಪಿ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಸರಕಾರ ರಚನೆಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಂದ ಅಹ್ವಾನ ಕರೆ ಬರುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಉಭಯ ಪಕ್ಷದ ಮೂಲಗಳು ತಿಳಿಸಿವೆ.


ವೆಬ್‌ದುನಿಯಾ ವಾರದ ಬ್ಲಾಗ್: ಚಂಪಕಾವತಿ

"ಇಲ್ಲಿ ಋಷಿಗಳ ವೇಷ ತೊಟ್ಟವರು ಆರಾಮವಾಗಿ ಸಿಗರೇಟು ಸೇದುತ್ತಾರೆ. ಸೀರೆ ಉಟ್ಟ ಹುಡುಗ, ಸೆರಗು ಯಾವ ಹೆಗಲಿಗೆಂದು ಗಲಿಬಿಲಿಗೊಳ್ಳುತ್ತಾನೆ. ರೈತನ ವೇಷ ತೊಟ್ಟ ಪೇಟೆ ಹುಡುಗಿ ನಾಚಿಕೆಯಿಂದ ಮುದುಡಿಹೋಗುತ್ತಾಳೆ. ಒಂದರ ಹಿಂದೊಂದು ಪ್ರವೇಶ. ಪರದೆ ಎಳೆಯುವವನೇ ಇಲ್ಲ ! ಚಂಪಕಾವತಿಯ ಎಣ್ಣೆ ಕೊಪ್ಪರಿಗೆಗೆ ಇಲ್ಲಿಂದ ಒಂದೇಒಂದು ಉರುಳು ! ಸ್ವಾಗತವು ನಿಮಗೆ."

ಇವು ಚಂಪಕಾವತಿ ಬ್ಲಾಗಿನ ಹಣೆಬರಹದ ಕೆಳಗೆ ಕಾಣಿಸುವ ಸಾಲುಗಳು. ಇವುಗಳನ್ನು ಓದಿದ ಕೂಡಲೇ ಈ ಬ್ಲಾಗಿನ ಉದ್ದೇಶ ನಮ್ಮ ಮುಂದೆ ಗರಿಗೆದರುತ್ತದೆ. ರಂಗಭೂಮಿ ಕ್ಷೇತ್ರದಲ್ಲಿ ಅಪರಿಮಿತ ಆಸಕ್ತಿ ಹೊಂದಿರುವಂತೆ ತೋರುವ ಸುಧನ್ವಾ ಅವರು ಚಂಪಕಾವತಿಯಲ್ಲಿ (http://deraje.blogspot.com/) ತಮ್ಮ ಅನುಭವಗಳನ್ನು ತೋಡಿಕೊಳ್ಳುತ್ತಾರೆ ಹಾಗೂ ಚರ್ಚಿಸುತ್ತಾರೆ.


Tuesday, October 30, 2007

ಜಗತ್ತಿನ ಅತಿದೊಡ್ಡ ಶ್ರೀಮಂತ ಅಂಬಾನಿ

ಈಗ ಭಾರತ ಪ್ರಕಾಶಿಸುತ್ತಿದೆ... ನಾವೂ ಶ್ರೀಮಂತರು ಎಂಬುದನ್ನು ಭಾರತೀಯ ಉದ್ಯಮಿಗಳು ಜಗತ್ತಿಗೆ ತೋರಿಸುತ್ತಿದ್ದಾರೆ. ಯಾಕೆಂದರೆ, ಜಗತ್ತಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಈಗ ಭಾರತೀಯನಾಗಿದ್ದಾನೆ. ಅವರು ಬೇರೆ ಯಾರು ಅಲ್ಲ, ಅವರೇ ರಿಲಯನ್ಸ್ ಕಂಪೆನಿಯ ಮುಖೇಶ್ ಅಂಬಾನಿ.

ಇಲ್ಲಿವರೆಗೆ ಜಗತ್ತಿನ ಅತಿದೊಡ್ಡ ಶ್ರೀಮಂತ ಸ್ಥಾನದಲ್ಲಿ ಕುಳಿತಿದ್ದ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಬಿಲೆನಿಯರ್ ಮುಖೇಶ್ ಅಂಬಾನಿ ಆ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಬಿಲ್ ಗೇಟ್ಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಎರಡನೇ ಸ್ಥಾನಕ್ಕೆ ಮ್ಯಾಕ್ಸಿಕನ್ ವ್ಯಾಪಾರಿ ದೈತ್ಯ ಕಾರ್ಲಸ್ ಸ್ಲಿಮ್ ಹಲು ಮತ್ತು ಇನ್ವೆಸ್ಟ್‌ಮೆಂಟ್ ಗುರು ವಾರೆನ್ ಬಫೆಟ್ ಜಿಗಿದಿದ್ದಾರೆ.


ಇಲ್ಲಿ ತುಪ್ಪದ ಕಾಲುವೆಯೇ ಹರಿಯುತ್ತದೆ...!

ನೀವು ಎಂದಾದರೂ ತುಪ್ಪ ಹೊಳೆಯಾಗಿ ಹರಿಯುವುದನ್ನು ಕೇಳಿದ್ದೀರಾ? ನಿಮ್ಮ ಉತ್ತರ ಖಂಡಿತವಾಗಿ ಇಲ್ಲ ಎಂದು ಬರುತ್ತದೆ ಎಂಬುದು ಗೊತ್ತು. ನಮ್ಮ ಹಿರಿಯರು ಹೇಳುತ್ತಿದ್ದರು ಒಂದು ಕಾಲದಲ್ಲಿ ಹಾಲು ತುಪ್ಪದ ಹೊಳೆ ಹರಿಯುತ್ತಿತ್ತು ಅಂತ... ಅದನ್ನು ಕೇಳಿದ್ದಿದೆ.

ಗುಜರಾತ್‌ನ ರೂಪಾಲ್ ಪಲ್ಲಿ ಎಂಬ ಕುಗ್ರಾಮದಲ್ಲಿ ಪ್ರತಿವರ್ಷ ನವರಾತ್ರಿಯ ಕೊನೆಯ ದಿನದಂದು ತುಪ್ಪದ ಹೊಳೆ ಇಂದಿಗೂ ಹರಿಯುತ್ತಿದೆ. ಈ ವರ್ಷದ ನವರಾತ್ರಿಯ ಕೊನೆಯ ದಿನದಂದು ಆರು ಲಕ್ಷ ಕಿಲೋ ತುಪ್ಪ ನದಿ ರೂಪದಲ್ಲಿ ಹರಿದಿದೆ.


ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger