ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, August 24, 2007

ನಟ ಸಲ್ಮಾನ್ ಖಾನ್ ಮೇಲ್ಮನವಿ ತಿರಸ್ಕೃತ

ಚಿಂಕಾರಾ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳನ್ಯಾಯಾಲಯ ವಿಧಿಸಿದ್ದ ಐದು ವರ್ಷಗಳ ಜೈಲು ಶಿಕ್ಷೆ ವಿರುದ್ಧ ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಜೋಧ್‌ಪುರದ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಇದರಿಂದಾಗಿ ಸಲ್ಮಾನ್ ಖಾನ್ ಇಕ್ಕಟ್ಟಿಗೆ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಬಂಧನದ ವಾರಂಟ್ ಜಾರಿಯಾಗಲಿದೆ. ಸಲ್ಮಾನ್ ಸೋಮವಾರ ಶರಣಾಗುವರೆಂದು ನಿರೀಕ್ಷಿಸಲಾಗಿದ್ದು, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಕೋರ್ಟ್ ಅವಕಾಶ ನೀಡಿದೆ.
ಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Wednesday, August 22, 2007

ಭಾರತೀಯ ಸಂಸ್ಕೃತಿ ಪಸರಿಸಲು "ಮಿಸ್ ಬಾಲಿವುಡ್"

ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಅಂತಾರಾಷ್ಟ್ರೀಯವಾಗಿ ಪ್ರಖ್ಯಾತಿ ಗಳಿಸಿರುವ ಕರ್ನಾಟಕದ ತರಳೆ ಶಿಲ್ಪಾ ಶೆಟ್ಟಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡತೊಡಗಿದ್ದಾರೆ.

ಲಂಡನ್‌ನಲ್ಲಿ ತನ್ನ ಪರಿಮಳದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಳಿಕ, ಜರ್ಮನಿಯಲ್ಲಿ ತನ್ನ ಬ್ರಾಡ್‌ವೇ ಸಂಗೀತ-ನೃತ್ಯ ಪ್ರದರ್ಶನ "ಮಿಸ್ ಬಾಲಿವುಡ್"ನ ಪ್ರೀಮಿಯರ್ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ.


ನಟಿಯು ಈಗ "ಮಿಸ್ ಬಾಲಿವುಡ್"ಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಇದು ಲಾಯ್ಡ್ ವೆಬರ್ ಅವರ ಬಾಂಬೇ ಡ್ರೀಮ್ಸ್ ಮಾದರಿಯಲ್ಲಿರುತ್ತದೆ.


ಇದು ಸೂರಿಯ ಹೊಸ ಚಿತ್ರ ಕಥೆ

ಕಲ್ಪನೆಗಳು ಅರಳುವುದೇ ಪತ್ರಗಳ ಪದಗಳಲ್ಲಿ, ಪದ ಪ್ರಯೋಗಗಳ ಭಾಷಾಲಂಕಾರದಲ್ಲಿ ಮನದಲ್ಲಿ ಮಿಡಿದದ್ದನ್ನು ಮಿಡಿದ ಹಾಗೆ ನಾಡಿ ಮಿಡಿತದ ತರಂಗಗಳಂತೆ ಉಭಯ ಕುಶಲೋಪರಿ ಸಾಂಪೃತದಿಂದ ಮೇಳೈಸಿ ಪುಟಾನುಗಟ್ಟಲೆ ಗೀಚುತ್ತಾ ಕೊನೆಗೆ ಇಂತಿ ನಿನ್ನ ಪ್ರೀತಿಯ...ಲ್ಲಿ ಅನ್ನುತ್ತಾ ಪೆನ್ನನ್ನು ಕೆಳಗಿಳಿಸಿದಾಗಲೇ ತೃಪ್ತಿ.

ಅದನ್ನೇ ಕಾನ್ಸೆಪ್ಟ್ ಆಗಿ ಒಂದು ಚಿತ್ರ ಕಥೆಯಾಗಿ ಮಾಡಿದರೆ ಹೇಗೆ? ಎಂಬ ಕಲ್ಪನಾ ಲಹರಿಯ ಹಂದರದ ವಸ್ತುವೇ ಇಂತಿ ನಿನ್ನ ಪ್ರೀತಿಯ ಸೂರಿಯ ಬಂಡವಾಳ. ಇದೊಂದು ವಿಚಿತ್ರ. ಸ್ಪೆಷಲ್ ಕಾನ್ಸೆಪ್ಟ್ಗಳ ಕಡೆ ಜನ ನೋಡ್ತಾರೆ ಆದ್ರೆ ನಮ್ಮ ಜೊತೇನೇ ಇರೋದನ್ನ ಗುರ್ತಿಸೋದೇ ಇಲ್ಲ. ಇನ್ನೂ ಕೆಲವರಿರ್ತಾರೆ ಹೊಸದನ್ನ ಹುಡುಕುತ್ತ ಹೋಗಿ ಕೊನೆಗೆ ಹಳೆಯದಕ್ಕೇ ಜೋತು ಬೀಳ್ತಾರೆ ಹೇಗೆಂದ್ರೆ ಹೊಸ ರುಚಿ ಸ್ವಲ್ಪ ಡಿಫರೆಂಟಾಗಿರ್ಬೇಕು ಅಂತ.


Tuesday, August 21, 2007

ಸಂಸದರ ಕ್ಷಮೆ ಕೇಳಿದ ರಾಯಭಾರಿ

ನವದೆಹಲಿ: ಅಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಾನು ಉಪಯೋಗಿಸಿದ ವಾಕ್ಯ, ಮಾಧ್ಯಮ ಮಿತ್ರರಿಗೆ ಅನ್ವಯಿಸುತ್ತದೆ ವಿನಃ ಭಾರತೀಯ ಸಂಸದರಿಗಲ್ಲ ಎಂದು ಭಾರತೀಯ ರಾಯಭಾರಿ ರೋನ್ ಸೇನ್ ಹೇಳಿಕೆ ನೀಡಿದ್ದು, ಭಾರತೀಯ ಸಂಸದರ ಮನಸ್ಸಿಗೆ ಬೇಸರವಾಗಿದ್ದಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಮಾಧ್ಯಮಗಳು ಅಣು ಒಪ್ಪಂದಕ್ಕೆ ಸಂಬಂಧ ಪಟ್ಟಂತೆ ತಲೆ ಇಲ್ಲದೇ ಜನಪ್ರತಿನಿಧಿಗಳ ಮತ್ತು ಉನ್ನತ ಅಧಿಕಾರವರ್ಗದ ಹೇಳಿಕೆಗಳತ್ತ ತಿರುಗುತ್ತಿದ್ದು ಅದೇ ಮಾತನ್ನೇ ಸಂದರ್ಶನದಲ್ಲಿ ಹೇಳಿದ್ದೆ. ಈ ಹೇಳಿಕೆಯಲ್ಲಿ ಸಂಸದರ ಅಭಿಪ್ರಾಯ ಮತ್ತು ನಿಲುವುಗಳಿಗೆ ಸಂಬಂಧಿಸಿದ್ದಲ್ಲ ಎಂದು ರೋನ್ ಸೇನ್ ನೀಡಿದ ಸ್ಪಷ್ಟೀಕರಣವನ್ನು ಲೋಕಸಭೆಯಲ್ಲಿ ಇಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಪ್ರಣಬ್ ಮುಖರ್ಜಿ ಓದಿದರು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಕಾಲಸರ್ಪ ಯೋಗ ಮತ್ತು ಪರಿಹಾರ

ಜನ್ಮಕುಂಡಲಿಯಲ್ಲಿನ ಗ್ರಹಗತಿಗಳು ವ್ಯಕ್ತಿಯ ಶ್ರೇಯಸ್ಸಿಗೆ ಧಕ್ಕೆ ತರಲು ಸಾಧ್ಯವೇ ? ವ್ಯಕ್ತಿಯನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿ ಜೀವನದಲ್ಲಿ ಜರ್ಜರಿತನನ್ನಾಗಿ ಮಾಡುತ್ತವೆಯೆ ? ಇಂತಹ ವಿಚಾರಗಳ ಕುರಿತು ಮಾತನಾಡುವುದು ಆಗಲಿ ಅಭಿಪ್ರಾಯ ವ್ಯಕ್ತಪಡಿಸುವುದು ಆಗಲಿ ಸಾಧ್ಯವಿಲ್ಲದ ಮಾತು. ಕೆಲವರು ಇದು ಶುದ್ದ ಸುಳ್ಳು ಎಂದು ವಾದಿಸಬಹುದು. 21 ನೇ ಶತಮಾನದಲ್ಲಿ ಇದ್ದರೂ ಸಾವಿರಾರು ಜನರು ಗ್ರಹದೋಷಗಳನ್ನು ನಂಬುತ್ತಾರೆ.

ಅಂತಹ ನಂಬಿಕೆಯಲ್ಲಿ ಕಾಲಸರ್ಪ ಯೋಗವೂ ಒಂದು. ನಂಬಿಕೆ, ಅಪನಂಬಿಕೆಗಳ ನಡುವೆ ಸಾಗುತ್ತಿರುವ ನಮ್ಮ ಪಯಣ ಸದ್ಯ ತ್ರ್ಯಂಬಕೇಶ್ವರ ಎಂಬ ಗ್ರಾಮಕ್ಕೆ ಬಂದು ನಿಂತಿದೆ. ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಗ್ರಾಮ ಕಾಲ ಸರ್ಪ ಯೋಗ ವಿಮೋಚನೆಗೆ ಪ್ರಸಿದ್ದಿ ಪಡೆದಿದೆ ಎಂಬ ಪ್ರತೀತಿ ಇದೆ. ಗ್ರಾಮಕ್ಕೆ ತೆರಳಿ ಅಲ್ಲಿ ನಡೆಯುವ ಸರ್ಪದೋಷ ವಿಮೋಚನೆಗಳನ್ನು ಕಣ್ಣಾರೆ ಕಾಣಬೇಕು ಎಂಬ ಉತ್ಸಾಹ ಮೇಲಾಗಿ ತಣಿಯದ ಕುತೂಹಲ ನಮ್ಮನ್ನಿಂದು ತ್ರ್ಯಂಬಕ ಗ್ರಾಮಕ್ಕೆ ಬರುವಂತೆ ಮಾಡಿದೆ. ಗ್ರಾಮಕ್ಕೆ ಹೋಗುವುದಕ್ಕೆ ಎಂದು ನಾವು ಟ್ಯಾಕ್ಸಿಗೆ ಕಾಯುತ್ತಿದ್ದೆವು. ಅಲ್ಲಿಗೆ ಬಂದ ಒಂದು ಟ್ಯಾಕ್ಸಿಯನ್ನೇರಿ ತ್ರ್ಯಂಬಕದತ್ತ ಸಾಗಿತು ನಮ್ಮ ನಂಬಿಕೆ, ಅಪನಂಬಿಕೆಗಳ ಪಯಣ...



Monday, August 20, 2007

ಮದ್ಯಂತರ ಚುನಾವಣೆಗೆ ಕಾಂಗ್ರೆಸ್ ಆದ್ಯತೆ: ಖರ್ಗೆ

ಬೆಂಗಳೂರು: ಸಮ್ಮಿಶ್ರ ಸರಕಾರದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ತಿಕ್ಕಾಟವನ್ನು ಗಮನಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ಒಂದು ವೇಳೆ ಬಿಜೆಪಿ ಮತ್ತು ಜೆಡಿ ಎಸ್ ನಡುವೆ ಅಧಿಕಾರ ಹಸ್ತಾಂತರ ಸಮಸ್ಯೆಯಾಗಿ ಪರಿಣಮಿಸಿದರೆ, ತಾನು ಜೆಡಿಎಸ್ ಜೊತೆ ಮತ್ತೆ ಕೈಗೂಡಿಸಿ ಅಧಿಕಾರಕ್ಕೆ ಏರುವುದಿಲ್ಲ. ಸಮ್ಮಿಶ್ರ ಸರಕಾರದ ರಚನೆಗೆ ಬದಲು ಮದ್ಯಂತರ ಚುನಾವಣೆಗೆ ಆದ್ಯತೆ ನೀಡುವುದಾಗಿ ತನ್ನ ನಿಲುವು ಪ್ರಕಟಿಸಿದೆ.

ಗುಲ್ಬರ್ಗಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮ್ಮಿಶ್ರ ಸರಕಾರದಲ್ಲಿ ಬಿಕ್ಕಟ್ಟು ಉಂಟಾದಲ್ಲಿ, ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳೊಂದಿಗೆ ಕೈಗೂಡಿಸುವುದಕ್ಕೆ ಕಾಂಗ್ರೆಸ್ ಮುಂದಾಗದು. ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವುದು ಸರಿಯಾದ ಮಾರ್ಗ ಎಂದು ಹೇಳಿದ್ದಾರೆ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬಚಕೇ ರಹನಾರೇ ಬಾಬಾ ತೆಲುಗಿಗೆ

ಮುಂಬೈ,: ದಕ್ಷಿಣ ಭಾರತದ ಚಿತ್ರಗಳನ್ನು ಬಾಲಿವುಡ್‌ಗೆ ಡಬ್ಬಿಂಗ್ ಮಾಡುವುದು ಹೊಸತಲ್ಲ.

ಆದರೆ ಬಾಲಿವುಡ್‌ನಿಂದ ಟಾಲಿವುಡ್ ಚಿತ್ರರಂಗಕ್ಕೆ ಡಬ್ ಮಾಡುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಾಲಿವುಡ್ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಹಾಗೂ ಚಿರಯವ್ವನೆ ರೇಖಾ ಅಭಿನಯದ 2005ರಲ್ಲಿ ತೆರೆಕಂಡ "ಬಚಕೇ ರಹೇನಾರೇ ಬಾಬಾ" ಬಾಲಿವುಡ್ ಚಿತ್ರ ತೆಲುಗಿಗೆ ಡಬ್ ಮಾಡಲಾಗುತ್ತಿದೆ.



ಚಿತ್ರಕ್ಕೆ ತೇಂಟಿಗಾಲು ಎಂದು ಹೆಸರಿಸಲಾಗಿದ್ದು, ಆಂಧ್ರದಾದ್ಯಂತ ಏಕ ಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಬಿಡುಗಡೆಗಿಂತ ಮೊದಲು ಟಾಲಿವುಡ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.

ಇದರ ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger