ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Saturday, September 8, 2007

ಕ್ರಿಕೆಟ್ ಸ್ಕೋರ್ ಕನ್ನಡದಲ್ಲಿ ಲೈವ್

ಭಾರತೀಯ ದಾಂಡಿಗರು ಇಂಗ್ಲೆಂಡ್ ವಿರುದ್ಧ ಸರಣಿ ನಿರ್ಣಾಯಕವಾಗಿರುವ ಏಳನೇ ತಥಾ ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಎದ್ದೂ ಬಿದ್ದು ಕಷ್ಟಪಟ್ಟು 187 ರನ್ ಸಂಪಾದಿಸಿದ್ದರೆ, ನಮ್ಮ ಆರ್.ಪಿ.ಸಿಂಗ್, ಇಂಗ್ಲೆಂಡಿನ ಆರಂಭಿಕ ದಾಂಡಿಗರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿದ್ದಾರೆ.

ಬ್ಲಾಗ್ ಲೋಕದೊಳಗೆ ವೆಬ್‌ದುನಿಯಾ ದೃಷ್ಟಿ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕ - ಬ್ಲಾಗ್. ಇಲ್ಲಿ ನಿಮಗೇನನಿಸುತ್ತದೋ... ಗೀಚಿ ಬಿಡಬಹುದು... ಅಲ್ಲಲ್ಲ... ಕುಟ್ಟಬಹುದು! "ವೆಬ್‌ದುನಿಯಾ ಕನ್ನಡ"ವು ವಾರಕ್ಕೊಂದು ಬ್ಲಾಗನ್ನು ವಿಶ್ಲೇಷಿಸಿ, 'ವಾರದ ಬ್ಲಾಗ್' ಎಂಬ ಅಂಕಣವನ್ನು ಆರಂಭಿಸುತ್ತಿದೆ.

ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Friday, September 7, 2007

ಬ್ಲಾಗ್ ಲೋಕದೊಳಗೆ ವೆಬ್‌ದುನಿಯಾ ದೃಷ್ಟಿ

ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು ಧನಾತ್ಮಕ ಪರಿಣಾಮಗಳಲ್ಲೊಂದು ಕೂಡ ಹೌದು.

ಸರಕಾರದ ಧೋರಣೆ ಬಗ್ಗೆ, ನಿಮ್ಮೂರಿನ ಸಮಸ್ಯೆಗಳ ಬಗ್ಗೆ... ನಿಮಗೇನನಿಸುತ್ತದೋ... ಬರೆದು ಬಿಡಿ... ಅಲ್ಲಲ್ಲ... (ಬ್ಲಾಗಿಗರ ಭಾಷೆಯಲ್ಲೇ ಹೇಳುವುದಾದರೆ) ಕೀಬೋರ್ಡ್ ಕುಟ್ಟಿ ಬಿಡಿ!

ವೆಬ್‌ದುನಿಯಾ ಕನ್ನಡ"ವು ವಾರಕ್ಕೊಂದು ಬ್ಲಾಗನ್ನು ವಿಶ್ಲೇಷಿಸಿ, 'ವಾರದ ಬ್ಲಾಗ್' ಎಂಬ ಅಂಕಣವನ್ನು ಆರಂಭಿಸುತ್ತಿದೆ.
ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗುರುವೇ ಇದು ಕನಸು.. ಬೇಡಾ

ಗುರುವೇ.... ಹೂಂ ಕೇಳಸ್ತಾ .. ನಮ್ಮ ಅಪ್ರತ್ಯಕ್ಷ ಗುರುಗಳು ಆದಂತಹಾ ಸಂದೀಪ್ ಮಿಶ್ರಾ. ಭಾರತೀಯರಿಗಾಗಿ, ಭಾರತೀಯ ಹಾಕಿಗಾಗಿ ದೊಡ್ಡ ಕನಸು ಕಟ್ಟಿಬಿಟ್ಟಿದ್ದಾರೆ.

ಎಂತಾ ಕನಸು ಅದು. ಎರಡೇ ವರ್ಷದಲ್ಲಿ ನಮ್ಮ ಹುಡುಗರು ಪ್ರಬ್ಜೋತು. ದಿಲೀಪು. ತುಷಾರ್, ಇಗ್ನೇಸ್ ಅವರ್ಮುಂದೆ ಸಚೀನೂ, ರಾಹುಲ್ ಯಾವ ಲೆಕ್ಕ ಇಲ್ಲ. ಅಯ್ಯೋ ಕರ್ಮ.. ಯಾರದು ಸಂದೀಪ್ ಮಿಶ್ರಾ ಅಂತ ಕೇಳ್ತಿಯಲ್ಲೋ...

ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ..

Thursday, September 6, 2007

ಲೇಡಿ ಡಾನ್ - ಶಿಲ್ಪಾ

ಫರಾನ್ ಅಕ್ತರ್ ಅವರ ಚಿತ್ರದ ಡಾನ್ ಪಾತ್ರದಲ್ಲಿ ಶಾರೂಕ್ ಖಾನ್ ಅಭಿನಯ ನಿರೀಕ್ಷಿಸಿದ ಮಟ್ಟದಲ್ಲಿಲ್ಲ ಎಂದು ನೀವು ಭಾವಿಸಿದ್ದರೆ, ನಿಮಗಾಗಿ ಒಂದು ಸುದ್ದಿ ಕಾದಿದೆ. ಡಾನ್ ಪರಂಪರೆ ಮುಂದುವರಿಸುವ ಜವಾಬ್ದಾರಿಯನ್ನು ತುಳುನಾಡಿನ ಯುವತಿ ಶಿಲ್ಪಾ ಶೆಟ್ಟಿ ಹೊತ್ತಿದ್ದಾಳೆ.

"ಶಿಲ್ಪಾ ದಿ ಬಿಗ್ ಡಾನ್‌"ನಲ್ಲಿ ಅವಳದ್ದು ಲೇಡಿ ಡಾನ್ ಪಾತ್ರ. ಶಿಲ್ಪಾಗೆ ಹಾಲಿವುಡ್ ಚಿತ್ರ "ಪಿಂಕ್ ಪ್ಯಾಂಥರ್ 2"ನಲ್ಲಿ ನಟಿಸುವ ಆಫರ್ ಇತ್ತು. ಆದರೆ ಶಿಲ್ಪಾ ಅದನ್ನು ನಿರಾಕರಿಸಿದಳೆಂಬ ಗುಸು ಗುಸು ಬಾಲಿವುಡ್‍‌ನಲ್ಲಿ ಹರಡಿದೆ.

ಸಚಿನ್, ಉತ್ತಪ್ಪ ಅಬ್ಬರ: ಸರಣಿ ಸಮಬಲ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಮಿಂಚಿನ 94 ರನ್‌ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ನಡೆದ ಸರಣಿಯ ಆರನೆ ಪಂದ್ಯವನ್ನು ಎರಡು ವಿಕೆಟ್‌ಗಳ ಅಂತರದಿಂದ ಗೆದ್ದ ಟೀಮ್ ಇಂಡಿಯಾ. ಕಂಡರಿಯದ ರೀತಿಯಲ್ಲಿ ಸರಣಿಯನ್ನು 3-3 ಅಂತರಕ್ಕೆ ತಂದು ನಿಲ್ಲಿಸಿದೆ. ಲಾರ್ಡ್ಸ್‌ನಲ್ಲಿ ಶನಿವಾರ ನಡೆಯಲಿರುವ ಅಂತಿಮ ಪಂದ್ಯ ಉಭಯ ತಂಡಗಳ ಪಾಲಿಗೆ ಸತ್ವ ಪರೀಕ್ಷೆಯಾಗಲಿದೆ.

ಎದುರಾಳಿ ಪಾಲ್ ಕಾಲಿಂಗ್‌ವುಡ್ ನೇತೃತ್ವದ ಬ್ರಿಟಿಷ್ ಪಡೆ ನೀಡಿದ ಆಸಾಧ್ಯದ 316 ರನ್‌ಗಳ ಸವಾಲನ್ನು ಬೆನ್ನತ್ತಿದ ಭಾರತ, ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಕೇಕೆ ಹಾಕಿತು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Wednesday, September 5, 2007

ಕನ್ನಡದಲ್ಲಿ ಲೈವ್ ಸ್ಕೋರ್ ಕಾರ್ಡ್


ಶಿಕ್ಷಕರ ದಿನಾಚರಣೆ ವಿಶೇಷ: ದಾರಿ ತೋರುವ ಗುರು

ಗುರು ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು ಎಂದರೆ ಇದನ್ನು ಕೇಳಿದ ತಕ್ಷಣವೇ ಶಿಷ್ಯರ ತಲೆ ಗೌರವದಿಂದ ಸ್ವಯಂ ಆಗಿ ಬಾಗುತ್ತದೆ. ಗುರುವು ದೂರ ಮಾಡಿದರೂ ತನ್ನ ಒಳಮನಸ್ಸು ಸ್ವೀಕರಿಸಿದ್ದವರನ್ನೇ ಗುರುವೆಂದು ಪರಿಭಾವಿಸಿಕೊಂಡು, ಏಕಾಗ್ರತೆಯಿಂದ ಬಿಲ್ವಿದ್ಯೆ ಸಾಧಿಸಿ, ಗುರುದಕ್ಷಿಣೆಯಾಗಿ ಕೊಂಬೆರಳು ಕತ್ತರಿಸಿದ ಗುರುವನ್ನು ನಮ್ಮ ಇತಿಹಾಸ ಕಂಡಿದೆ. ಎಲ್ಲೋ ದಟ್ಟ ಹಳ್ಳಿಯೊಂದರಲ್ಲಿ, ಮೂಲಭೂತ ಸೌಕರ್ಯವೂ ಇಲ್ಲದ ಶಾಲೆಯಲ್ಲಿ ಎಲ್ಲಾ ನೋವು ನುಂಗಿಕೊಂಡು, ತನ್ನನ್ನೇ ನೆಚ್ಚಿಕೊಂಡು ಬಂದ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆದು, ಅವರ ಭವಿಷ್ಯ ಉಜ್ವಲವಾಗಿಸುವಲ್ಲೇ ಸಂತೋಷ ಕಾಣುವ ಶಿಕ್ಷಕರ ಬಗ್ಗೆಯೂ ಆಗೀಗ್ಗೆ ಕೇಳುತ್ತೇವೆ.

ಮಗುವಿನ ಮನಸ್ಸು ಹಸಿ ಮಣ್ಣಿನಂತೆ. ಅದನ್ನು ಎರಡೂ ಕೈಗಳಿಂದ ಆದರದಿಂದ ತಟ್ಟಿ, ತಟ್ಟಿ ಸುಂದರವಾದ, ಕಲಾತ್ಮಕವಾದ ವಿಗ್ರಹ ರೂಪಿಸುವುದು ಗುರುವಿನ ಗುರಿ. ಗುರುವಿಲ್ಲದ ಗುರಿಯು ಕೂಡ ಸಾಧಿಸಲಸದಳ. ಅದಕ್ಕೇ ಹೇಳುವುದು ವಿದ್ಯೆಯು ದುಡ್ಡುಕೊಟ್ಟು ಖರೀದಿಸಬಲ್ಲ ಸೊತ್ತಲ್ಲ. ಅಥವಾ ವಿದ್ಯೆ ಎಂಬುದು ಮಾರಾಟದ ಸೊತ್ತೂ ಅಲ್ಲ. ವಿದ್ಯೆಯನ್ನಂತೂ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ.

ಪೂರ್ಣ ಲೇಖನವನ್ನು ಇಲ್ಲಿ ಓದಿ.

Tuesday, September 4, 2007

ಸಾನಿಯಾ ಎಂಟರ ಘಟ್ಟಕ್ಕೆ, ಪೇಸ್ ಸೆ.ಫೈನಲ್‌ಗೆ

ಮಾಜಿ ಚಾಂಪಿಯನ್ನರಾದ ಲೀಸಾ ರೇಮಂಡ್ ಮತ್ತು ಸಮಂತಾ ಸ್ಟಾಸರ್ ಅವರಿಗೆ ಆಘಾತ ನೀಡಿದ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮಾಟೆಕ್ ಅವರು, ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲಿಗೆ ಏರಿದ್ದಾರೆ.

ಆದರೆ, ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮತ್ತು ಮಹೇಶ್ ಭೂಪತಿ ಜೋಡಿಯು ಬೆಲಾರುಸ್ ಜೋಡಿಯೆದುರು ಪರಾಭವ ಅನುಭವಿಸಿ ಕೂಟದಿಂದ ಹೊರಬಿದ್ದಿದೆ.

ಪಾಕಪ್ರವೀಣೆ ತನುಶ್ರೀ ದತ್ತಾ

ಬಾಲಿವುಡ್ ತಾರೆ ತನುಶ್ರೀ ದತ್ತಾಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ನಾನಾ ತರದ ತಿನಿಸುಗಳನ್ನು ಮಾಡುವ ಪ್ರಯೋಗದಲ್ಲೇ ಆಕೆ ಮುಳುಗುತ್ತಾಳೆ. ಅದೂ ಬಟರ್ ಚಿಕನ್ ಮಾಡುವುದೆಂದರೆ ತುಂಬ ಖುಷಿ.

ಹೀಗೆಂದು ಆಕೆಯೇ ಹೇಳಿಕೊಂಡಿದ್ದಾಳೆ. ಆದರೆ ಸಿಕ್ಕಿದ್ದೆಲ್ಲ ತಿಂದು ಮೈಬೊಜ್ಜು ಬರಬಾರದಲ್ಲ, ಅದಕ್ಕಾಗಿ ತನ್ನ ಕ್ಯಾಲರಿ ಬಗ್ಗೆ ಎಚ್ಚರಿಕೆಯೂ ಇದೆ. ಸಿಕ್ಕಾಪಟ್ಟೆ ತಿರುಗಾಡುವುದೆಂದರೆ ಆಕೆಗೆ ಎಲ್ಲಿಲ್ಲದ ಖುಷಿಯಂತೆ.

ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Monday, September 3, 2007

ಮಥುರೆಯಲ್ಲಿ ಕೃಷ್ಣಾಷ್ಟಮಿ ಸಡಗರ

ಶ್ರೀಕೃಷ್ಣ ಪರಮಾತ್ಮ ಹುಟ್ಟಿ ಬೆಳೆದ ಮಥುರೆಯಲ್ಲಿ ಕೃಷ್ಣಾಷ್ಟಮಿಯ ದಿನದಂದು ಆಚರಣೆಗಳು ಉತ್ತುಂಗಕ್ಕೇರುತ್ತವೆ. ದೆಹಲಿಯಿಂದ 145 ಕಿ.ಮೀ. ದೂರವಿರುವ ಮಥುರೆಯಲ್ಲಿ ಎಲ್ಲೆಂದರಲ್ಲಿ ಸಡಗರದ ಸಂಭ್ರಮ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಅಸುರರ ಅಟ್ಟಹಾಸಕ್ಕೆ ಅಂತ್ಯಹಾಡಲು ಇಲ್ಲಿ ಕೃಷ್ಣ ಪರಮಾತ್ಮ ಜನ್ಮತಾಳಿದನೆಂಬ ಪ್ರತೀತಿ ಇದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ ಜನ್ಮ ತಾಳಿದ ನೈಜ ಸ್ಥಳದಲ್ಲಿ ಪ್ರಮುಖ ಆಚರಣೆ ಜರುಗುತ್ತದೆ. ಆ ಜಾಗದಲ್ಲಿಂದು ಬಹುದೊಡ್ಡ ದೇವಸ್ಥಾನ ನಿರ್ಮಾಣವಾಗಿದೆ. ಕೃಷ್ಣ ಜನ್ಮಭೂಮಿ ಮಂದಿರವೆಂದು ಕರೆಯಲ್ಪಡುವ ಈ ಮಂದಿರದಲ್ಲಿ ಭಗವಂತನ ಮೂರ್ತಿಯನ್ನು ಗರ್ಭಗೃಹದಲ್ಲಿ ಇರಿಸಲಾಗಿದೆ.

ಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಶರೀಫ್ ಪಾಕ್‌ನ ಜನಪ್ರಿಯ ನಾಯಕ

ಬೇನಜೀರ್ ಭುಟ್ಟೊ-ಮುಷರ್ರಫ್ ಅವರ ನಡುವೆ ಸಂಧಾನದ ಹಿನ್ನೆಲೆಯಲ್ಲಿ ಗಡೀಪಾರಾದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಈಗ ಪಾಕಿಸ್ತಾನದ ಅತ್ಯಂತ ಜನಪ್ರಿಯ ನಾಯಕರೆಂದು ತಿಳಿದುಬಂದಿದೆ.

ಅಧ್ಯಕ್ಷ ಮುಷರ್ರಫ್ ಜತೆ ಬೇನಜೀರ್ ಭುಟ್ಟೊ ಅಧಿಕಾರ ಹಂಚಿಕೆಯ ಹತಾಶ ಯತ್ನವು ಶರೀಫ್ ಅವರನ್ನು ಅತ್ಯಂತ ಜನಪ್ರಿಯ ನಾಯಕರನ್ನಾಗಿಸಿದೆ ಎಂದು ಗುಪ್ತಚರ ಸಂಸ್ಥೆಗಳನ್ನು ಉಲ್ಲೇಖಿಸಿ ಸರ್ಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಶರೀಫರ ಗೆಲುವು ಕೂಡ ಅವರ ಜನಪ್ರಿಯತೆಯ ರೇಖೆ ಏರಿಕೆಗೆ ಕಾರಣವಾಗಿದೆ.

ಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger