ರಂಜಾನ್ ಹಬ್ಬ ಮಾನವರೆಲ್ಲರೂ ಸರಿಸಮಾನರು ಎನ್ನುವ ಸಂದೇಶವನ್ನು ಸಾರುತ್ತದೆ. ಜನರು ಪರಸ್ಪರ ಸಂತೋಷದಲ್ಲಿ ಭಾಗಿಯಾಗಿ, ಕಷ್ದದಲ್ಲಿದ್ದವರಿಗೆ ತಮ್ಮಿಂದ ಆದಷ್ಟು ಸಹಾಯ ಹಸ್ತ ನೀಡಿ ಪ್ರತಿಯೊಬ್ಬ ಬಡವರು ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುತ್ತದೆ.
ಪೈಗಂಬರ್ ಹಜರತ್ ಮೊಹಮ್ಮದ್ ಅವರು ಸದಕ್- ಎ- ಫಿತ್ರ್ ಅನ್ನು ಅವಶ್ಯಕ ದಾನವೆಂದು ಕರೆದಿದ್ದಾರೆ. ಈ ದಾನವನ್ನು ರಂಜಾನ್ ಉಪವಾಸ ಮುಗಿದ ಮೇಲೆ ನೀಡಲಾಗುತ್ತದೆ. ಈ ದಾನವನ್ನು ಅನ್ಯಾಯ ಮತ್ತು ಅನವಶ್ಯಕ ಮಾತುಗಳಿಂದ ದೂರವಿರಲು ನೀಡಲಾಗುತ್ತದೆ.
0 comments:
Post a Comment